ಆರ್ಥಿಕ ಸಮಸ್ಯೆ ದೂರವಾಗಲು ಸೋಮವಾರದಂದು ಕಲ್ಲುಪ್ಪಿನಿಂದ ಹೀಗೆ ಮಾಡಿ

ಮಂಗಳವಾರ, 8 ಜನವರಿ 2019 (07:08 IST)
ಬೆಂಗಳೂರು : ಪ್ರತಿಯೊಬ್ಬರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಮನೆಯಲ್ಲಿ ಮನಃಶಾಂತಿ ಇಲ್ಲದಿರುವುದು, ದಂಪತಿಗಳ ನಡುವೆ ಮನಸ್ತಾಪಗಳು, ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಈ ಸಮಸ್ಯೆಗಳು ದೂರವಾಗಲು ಸೋಮವಾರದ ದಿನ ಈ ಚಿಕ್ಕ ಪರಿಹಾರವನ್ನು ಮಾಡಿ.


ಸೋಮವಾರದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನವನ್ನು ಮಾಡಿ ನಿಮ್ಮ ಮನೆಯ ಹತ್ತಿರವಿರುವ ಶಿವ ದೇವಸ್ಥಾನಕ್ಕೆ ಹೋಗಬೇಕು. ಹೀಗೆ ಹೋಗುವಾಗ ಕೈಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿ ನಲ್ಲಿಯ ಹತ್ತಿರ ಹೋಗಿ ನಲ್ಲಿಯಲ್ಲಿ ಕೈ ಮುಷ್ಟಿಯಲ್ಲಿರುವ ಕಲ್ಲುಪ್ಪನ್ನು ನಲ್ಲಿಯ ಕಳಗಡೆ ಹಿಡಿಯಬೇಕು.


ಈ ಕ್ರಿಯೆಯನ್ನು ಬೆಳಗಿನ ಜಾವ 6 ರಿಂದ 7 ಗಂಟೆಯ ಮಧ್ಯದಲ್ಲಿ ಮಾಡಬೇಕು. ಏಕೆಂದರೆ ಆ ವೇಳೆ ಎಲ್ಲಾ ಕ್ಷೇತ್ರಗಳಲ್ಲಿ ಚಂದ್ರನ ಪ್ರಭಾವ ಹೆಚ್ಚಾಗಿರುತ್ತದೆ. ಹೀಗೆ ಮಾಡುವಾಗ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು.  ಆಗ ಉಪ್ಪಿನ ಮೇಲೆ ನೀರು ಬಿದ್ದಾಗ ಹೇಗೆ ಉಪ್ಪು ಕರಗುತ್ತದೆಯೋ ಹಾಗೇ ನಿಮ್ಮ ಸಮಸ್ಯೆಗಳು ಕರಗಿ ದೂರಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ