ಮಹಾವಿಷ್ಣುವಿನ ಈ ಒಂದು ಮಂತ್ರ ಹೇಳಿದರೆ ಅನಾರೋಗ್ಯ ಸಮಸ್ಯೆಗೆ ಮುಕ್ತಿ

Krishnaveni K

ಗುರುವಾರ, 26 ಸೆಪ್ಟಂಬರ್ 2024 (08:24 IST)
ಬೆಂಗಳೂರು: ಕೆಲವೊಮ್ಮೆ ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ವಾಸಿಯಾಗದೇ ಇದ್ದಾಗ ದೇವರ ಮೊರೆ ಹೋಗಬೇಕಾಗುತ್ತದೆ. ಇಂದು ಅನಾರೋಗ್ಯ ಸಮಸ್ಯೆ ಮುಕ್ತಿಗೆ ಮಹಾವಿಷ್ಣುವಿನ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ.

ಧನ್ವಂತರಿ ಎಂದರೆ ದೇವರುಗಳ ವೈದ್ಯನೆಂದೇ ಪ್ರಖ್ಯಾತಿ. ಧನ್ವಂತರಿ ಬೇರೆ ಯಾರೂ ಅಲ್ಲ. ಆ ಮಹಾವಿಷ್ಣುವೇ ದೇವತೆಗಳ ರೋಗ ವಾಸಿ ಮಾಡಲು ಧನ್ವಂತರಿ ರೂಪದಲ್ಲಿ ಜನ್ಮ ತಾಳಿದ ಎಂದು ಪುರಾಣಗಳು ಹೇಳುತ್ತವೆ. ಇಂದಿಗೂ  ವೈದ್ಯರ ರೂಪದಲ್ಲಿ ಧನ್ವಂತರೀ ದೇವರು ನಮ್ಮನ್ನು ರಕ್ಷಿಸುತ್ತಿದ್ದಾನೆ ಎನ್ನಬಹುದು.

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಹಾವಿಷ್ಣುವಿನ ಈ ಧನ್ವಂತರೀ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಅದು ಹೀಗಿದೆ:
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ
ಅಮೃತ ಕಲಸ ಹಸ್ತಾಯ ವಜ್ರಜಲಕೌ ಹಸ್ತಾಯ
ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ

ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ನಿಮ್ಮ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಸಕಾರಾತ್ಮಕ ಭಾವ ಮೂಡುವುದು. ದಿನೇ ದಿನೇ ನಿಮ್ಮ ಶರೀರ ಸೌಖ್ಯ ವೃದ್ಧಿಯಾಗಿ ಆರೋಗ್ಯವಂತರಾಗುವಿರಿ. ಜೊತೆಗೆ ಆ ಮಹಾವಿಷ್ಣುವಿನ ಅನುಗ್ರಹಕ್ಕೂ ಪಾತ್ರರಾಗುವಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ