ಪೊರಕೆಗೆ ಈ ರೀತಿ ಮಾಡಿದರೆ ಮನೆಯ ಯಜಮಾನನಿಗೆ ದರಿದ್ರ

ಮಂಗಳವಾರ, 19 ಜೂನ್ 2018 (16:41 IST)
ಮನೆಯ ಬೆಳಕು ಗೃಹಿಣಿ ಎನ್ನುತ್ತಾರೆ ನಮ್ಮ ಹಿರಿಯರು. ಇದು ಸತ್ಯ. ಗೃಹಿಣಿಯರು ಮಾಡುವ ಕೆಲಸಗಳ ಮೇಲೆಯೇ ಆ ಮನೆಯ ಪರಿಸ್ಥಿತಿಯು ಆಧಾರವಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ  ಗೃಹಿಣಿಯರು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವು ತಪ್ಪುಗಳು ಮನೆಯಲ್ಲಿ ದರಿದ್ರವನ್ನುಂಟುಮಾಡುತ್ತದೆ.

ಸಾಮಾನ್ಯವಾಗಿ ಮಹಿಳೆಯರು ದಿನಕ್ಕೆ 2 ಅಥವಾ 3 ಬಾರಿ ಮನೆಯನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. 2 ಹೊತ್ತು ಸ್ವಚ್ಚಗೊಳಿಸುವುದು ಒಳ್ಳೆಯದೆಂದು ಜ್ಯೋತಿಷ್ಯರು ಹೇಳುತ್ತಾರೆ. ಕೆಲ ಮಹಿಳೆಯರು ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆಯನ್ನು ಕಾಲಿಗೆ ತಗಲುವಂತೆ ನಡೆಯುವುದು, ದಾಟುವುದು, ತುಳಿಯುವುದು ಮಾಡುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಶನೀಶ್ವರ ಹಾಗೂ ಲಕ್ಷ್ಮೀದೇವಿಯರಿಗೆ ತೀವ್ರ ಕೋಪ ತರಿಸಿದಂತೆ ಆಗುತ್ತದೆ.

ಹೀಗೆ ಕೋಪ ಬಂದಾಗ ಆಕೆ ನಿಮ್ಮ ಮನೆಯಿಂದ ಹೊರಟುಹೋಗುತ್ತಾಳೆ. ಇದರಿಂದ  ನಿಮ್ಮ ಮನೆಯ ಯಜಮಾನನಿಗೆ ದರಿದ್ರ ಎದುರಾದಂತೆಯೇ. ಆದ್ದರಿಂದ ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆ ಕಾಲಿಗೆ ತಾಕದಂತೆ, ದಾಟದಂತೆ ತುಳಿಯದಂತೆ ನೋಡಿಕೊಳ್ಳಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ