ಕಾರ್ತಿಕ ಮಾಸದಲ್ಲಿ ಊಟವನ್ನು ಈ ಎಲೆಯ ಮೇಲೆ ಮಾಡಿದರೆ ತ್ರಿಮೂರ್ತಿಗಳ ಅನುಗ್ರಹ ದೊರೆಯುವುದು

ಗುರುವಾರ, 19 ನವೆಂಬರ್ 2020 (06:11 IST)
ಬೆಂಗಳೂರು : ದೀಪಾವಳಿ ಅವಮಾಸ್ಯೆ ಮುಗಿದ ಬಳಿಕ ಬರುವ ಮೊದಲ ದಿನವನ್ನು ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಮಾಸಗಳಲ್ಲಿಯೇ ಅತ್ಯಂತ ಪವಿತ್ರವಾದ ಮಾಸ ಕಾರ್ತಿಕ ಮಾಸ ಎನ್ನುತ್ತಾರೆ. ಈ ಮಾಸದಲ್ಲಿ ಒಂದು ಹೊತ್ತು ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮಗೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸದಲ್ಲಿ  ಶಿವಕೇಶವನನ್ನು ಪೂಜಿಸಲಾಗುತ್ತದೆ. ನಿಯಮ ಪ್ರಕಾರ ಕಾರ್ತಿಕ ಮಾಸದಲ್ಲಿ ಪೂಜೆ ಮಾಡಿದರೆ ನಿಮಗೆ ಶಿವ ಹಾಗೂ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಹಾಗೇ ಕಾರ್ತಿಕ ಮಾಸದಲ್ಲಿ ಒಂದು ದಿನವಾದರೂ ಒಂದು ಹೊತ್ತು ಊಟ ಮಾಡುವಾಗ ಮತ್ತುಗದ ಎಲೆಯ ಮೇಲೆ ಊಟ ಮಾಡಿದರೆ ಬ್ರಹ್ಮದೇವನ ಅನುಗ್ರಹ ದೊರೆಯುತ್ತದೆ. ಇದರಿಂದ ಕಾರ್ತಿಕ ಮಾಸದಲ್ಲಿ ತ್ರಿಮೂರ್ತಿಗಳ ಅನುಗ್ರಹ ನಿಮಗೆ ದೊರೆತು ನಿಮ್ಮ ಜೀವನ ಪಾವನವಾಗುವುಉದ ಖಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ