ಮಕ್ಕಳ ವಿದ್ಯೆ , ಅಪಮೃತ್ಯು ಹಾಗೂ ಅನಾರೋಗ್ಯ ದೋಷ ನಿವಾರಣೆ ಈ ದೇವರ ಫೋಟೋ ಮನೆಯಲ್ಲಿ ಹಾಕಿ

ಬುಧವಾರ, 13 ಜೂನ್ 2018 (06:24 IST)
ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಆರೋಗ್ಯವಂತರಾಗಿ ನೂರು ವರ್ಷ ಬಾಳಬೇಕು ಎಂದು ಎಲ್ಲಾ ತಂದೆ ತಾಯಿಗೂ ಆಸೆ ಇದ್ದೇ ಇರುತ್ತದೆ. ಅಂತವರು ತಮ್ಮ ಮನೆಯಲ್ಲಿ ಈ ಒಂದು ಫೋಟೋವನ್ನು ಇಟ್ಟರೆ ಮಕ್ಕಳಿಗಿರುವ ವಿದ್ಯೆ ದೋಷ, ಅಪಮೃತ್ಯು ದೋಷ, ಹಾಗೂ ಅನಾರೋಗ್ಯ ದೋಷ ನಿವಾರಣೆಯಾಗುತ್ತದೆ.


ಮಕ್ಕಳಲ್ಲಿ ತುಂಟತನ ಜಾಸ್ತಿಯಿರುವುದರಿಂದ ಅವರಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಹಾಗೇ ಅವರಿಗೆ ಬಾಲಗ್ರಹದೋಷ ಇರುತ್ತದೆ. ಇದರಿಂದ  ಅವರು ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹ ವಿಘ್ನಗಳನ್ನು ಹೋಗಲಾಡಿಸೋಕೆ ಎಲ್ಲಾ ದೇವಾನುದೇವತೆಗಳಲ್ಲಿಯೇ ಅತ್ಯಂತ ಶ್ರೇಷ್ಟಕರವಾಗಿರುವಂತಹ ಸಂಕಲ್ಪ ಇರುವಂತಹ, ದಕ್ಷಿಣಕ್ಕೆ ಅಭಿಮುಖವಾಗಿರುವಂತಹ ‘ದಕ್ಷಿಣಾಮೂರ್ತಿ ‘ದೇವರ ಫೋಟೋವನ್ನು ಮನೆಯಲ್ಲಿ ಅದರಲ್ಲೂ ಹಾಲ್ ನಲ್ಲಿ ಹಾಕಬೇಕು.


ಇದರಿಂದ ದಕ್ಷಿಣದ ಅಪಮೃತ್ಯು ದೋಷಗಳನ್ನು ಆ ದಿಕ್ಕಿಗೆ  ಮುಖ ಮಾಡಿ ಕುಳಿತಿರುವ ಈ ದೇವರು ನಿವಾರಿಸುತ್ತಾನೆ. ಈ ಫೋಟೊವನ್ನು ನೋಡಿದವರ ಸಕಲ ದೋಷಗಳು ನಿವಾರಣೆಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ