ಶನಿದೇವ ಮತ್ತು ಆಂಜನೇಯಸ್ವಾಮಿಯ ಅನುಗ್ರಹ ಪಡೆಯಲು ಈ ದೀಪ ಬೆಳಗಿ

ಶನಿವಾರ, 3 ಏಪ್ರಿಲ್ 2021 (06:35 IST)
ಬೆಂಗಳೂರು : ಶನಿವಾರ ಶನಿ ದೇವ ಹಾಗೂ ಆಂಜನೇಯಸ್ವಾಮಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶನಿದೇವ ಹಾಗೂ ಆಂಜನೇಯಸ್ವಾಮಿಯ ಅನುಗ್ರಹ ಪಡೆದು ಸಂಪತ್ತು ವೃದ್ಧಿಯಾಗಲು ಶನಿವಾರದಂದು ಈ ದೀಪವನ್ನು ಹಚ್ಚಿ.

ಶನಿವಾರದಂದು ಶನಿದೇವನನ್ನು ಮೆಚ್ಚಿಸಲು ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು. ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಾಗಿ ನಿಮಗೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಸಮಸ್ಯೆ ಎದುರಾದರೆ ಬಹಳ ಬೇಗ ಪರಿಹಾರವಾಗುತ್ತದೆ.

ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಲು ತ್ರಿಕೋನಾ ದೀಪಗಳನ್ನು ಆಂಜನೇಯ ಸ್ವಾಮಿಯ ಮುಂದೆ ಬೆಳಗಬೇಕು. ಮಣ‍್ಣು, ಹಿಟ್ಟು, ತಾಮ್ರ, ಬೆಳ್ಳಿ, ಕಬ್ಬಿಣ, ಹಿತ್ತಾಳೆ, ಅಥವಾ ಚಿನ್ನದ ಲೋಹದ ದೀಪವನ್ನು ಬಳಸಬಹುದು. ಆದರೆ ‍ಧಾನ್ಯದ ಹಿಟ್ಟಿನಿಂದ ಮಾಡಿದ ದೀಪವು ತುಂಬಾ ಒಳ್ಳೆಯದು. ಅದರಲ್ಲೂ ಹೆಸರು ಬೇಳೆ, ಅಕ್ಕಿ, ಗೋಧಿ, ಉದ್ದು ಮತ್ತುಜೋಳದ ಹಿಟ್ಟಿನಿಂದ ಮಾಡಿದ ದೀಪ ತುಂಬಾ ಉತ್ತಮ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ