ಅರಳಿ ಮರ, ತುಳಸಿ ಗಿಡವನ್ನು ಪೂಜಿಸಿ ಎಂದು ಹೇಳಲು ಒಂದು ಮುಖ್ಯ ಕಾರಣವಿದೆ. ಏನದು ಗೊತ್ತಾ?

ಭಾನುವಾರ, 8 ಜುಲೈ 2018 (06:39 IST)
ಬೆಂಗಳೂರು : ಅರಳಿ ಮರ, ತುಳಸಿ ಗಿಡಕ್ಕೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಇದಕ್ಕೆ ಒಂದು ಮುಖ್ಯವಾದ ಕಾರಣವು ಇದೆ. ಅದೇನೆಂಬುದು ಇಲ್ಲಿದೆ ನೋಡಿ.


ಸಹಜವಾಗಿ ಗಿಡಮರಗಳೆಲ್ಲಾ ಕಿರಣಜನ್ಯ ಸಂಯೋಜನೆ ಕ್ರಿಯೆಯ ಭಾಗವಾಗಿ ಸೂರ್ಯನಿರುವಾಗ ಕಾರ್ಬನ್‌ಡೈ ಆಕ್ಸೈಡ್ ತೆಗೆದುಕೊಂಡು ಆಕ್ಸಿಜನ್ ಬಿಡುಗಡೆ ಮಾಡುತ್ತವೆ. ಅದೇ ರಾತ್ರಿ ಹೊತ್ತು ಮನುಷ್ಯರಂತೆ ಆಕ್ಸಿಜನ್ ತೆಗೆದುಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಬಿಡುಗಡೆ ಮಾಡುತ್ತವೆ. ಆದರೆ ಅರಳಿ ಮರ ಆ ರೀತಿ ಅಲ್ಲ. ರಾತ್ರಿ ಹೊತ್ತು ಸಹ ಆಕ್ಸಿಜನ್ ಬಿಡುಗಡೆ ಮಾಡಿ ಜೀವಕೋಟಿಗೆ ಅಗತ್ಯವಾದ ಪ್ರಾಣವಾಯುವನ್ನು ನೀಡುತ್ತಿದೆ. ಆದಕಾರಣ ಅರಳಿಮರವನ್ನು ಯಾವ ಕೆಲಸಕ್ಕೆ ಬರಲ್ಲ ಎಂದು ಕಡಿಯಬಾರದೆಂದು ಅದನ್ನು ಪೂಜಿಸುತ್ತಾರೆ.


ಅದೇರೀತಿ ತುಳಸಿ ಗಿಡದಲ್ಲಿರುವ ವಿಶೇಷ ಗುಣಗಳು, ಅದ್ಭುತ ಔಷಧಗಳು ಇನ್ಯಾವ ಗಿಡದಲ್ಲಿಲ್ಲ. ಬೆಳಗ್ಗೆ ಕುಡಿಯುವ ಟೀಯಲ್ಲಿ ಒಂದು ತುಳಸಿ ಎಲೆಯನ್ನು ಹಾಕಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮನೆಯ ಆವರಣದಲ್ಲಿ ತುಳಸಿ ಗಿಡ ಇರುವುದರಿಂದ ಯಾವುದೇ ಕ್ರಿಮಿಕೀಟಗಳು, ಸೊಳ್ಳೆಯಗಳು ಮನೆಗೆ ಬರಲ್ಲ. ಆಕ್ಸಿಜನ್ ತೆಗೆದುಕೊಂಡು ಆಕ್ಸಿಜನ್ ಕೊಡುವ ಏಕೈಕ ಗಿಡವೇ ತುಳಸಿ ಗಿಡ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ