ದೇವರ ಪ್ರತಿಮೆಗಳುಳ್ಳ ವಸ್ತುಗಳನ್ನು ಧರಿಸಿದವರು ಈ ನಿಯಮಗಳನ್ನು ಪಾಲಿಸಲೇಬೇಕು!

ಶುಕ್ರವಾರ, 6 ಏಪ್ರಿಲ್ 2018 (07:28 IST)
ಬೆಂಗಳೂರು : ನಮ್ಮಲ್ಲಿ ಬಹಳಷ್ಟು ಮಂದಿ ದೇವರ ಪ್ರತಿಮೆಗಳುಳ್ಳ ಉಂಗುರ, ಕತ್ತಿನಲ್ಲಿ ಸರಕ್ಕೆ ಲಾಕೆಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ದೇವರ ಪ್ರತಿಮೆಗಳುಳ್ಳ ಉಂಗುರಗಳನ್ನು ಧರಿಸಿದರಷ್ಟೇ ಸಾಲದು. ಅವು ಧರಿಸಲು, ಧರಿಸಿದ ಬಳಿಕ ಸಹ ಕೆಲವು ಪದ್ಧತಿಗಳಿವೆ. ಅವನ್ನು ಪಾಲಿಸದೇ ಹೋದರೆ ನಷ್ಟ ಉಂಟಾಗುತ್ತದೆ. ಆ ನಿಯಮಗಳು ಏನೂ ಎಂಬುದು ಇಲ್ಲಿದೆ ನೋಡಿ.


*ಉಂಗುರ ಧರಿಸುವ ಮೊದಲು ಆಲಯಗಳಲ್ಲಿ ಸೂಕ್ತ ಪೂಜೆ, ಅಭಿಷೇಕ ಮಾಡಿಸಬೇಕು. ಆಗಲೇ ಅದಕ್ಕೆ ಶಕ್ತಿ ಸಿಗುತ್ತದೆ. ಆ ಭಗವಂತ ನಮ್ಮೊಂದಿಗೆ ಇರುವ ಅನುಭಾವ ಸಿದ್ದಿಸುತ್ತದೆ.

*ಉಂಗುರದಲ್ಲಿರುವ ದೇವರ ಪ್ರತಿಮೆ ಕಾಲುಗಳು ಕೈ ಉಗುರುಗಳ ಕಡೆಗೆ, ಮಣಿಕಟ್ಟಿನ ಕಡೆಗೆ ಇರುವಂತೆ ಧರಿಸಬೇಕು. ನಮಸ್ಕರಿಸುವಾಗ ಮುಷ್ಟಿ ಮಡಚಿ ನಮಸ್ಕರಿಸಬೇಕು.. ಆಗ ಭಗವಂತನ ಕಾಲಿಗೆ ನಮಸ್ಕರಿಸಿದವರಾಗುತ್ತೇವೆ.

*ದೇವರ ಪ್ರತಿಮೆ ಇರುವ ಉಂಗುರಗಳನ್ನು ಧರಿಸಿ ಮಾಂಸಾಹಾರ ಸೇವಿಸಬಾರದು. ಅಷ್ಟೇ ಅಲ್ಲ ಎಂಜಲು ತಾಗದಂತೆ ಎಚ್ಚರ ವಹಿಸಬೇಕು.

*ಸ್ತ್ರೀಯರು ಮುಟ್ಟಿನ ಸಮಯದಲ್ಲಿ ಉಂಗುರ, ಲಾಕೆಟ್‍ಗಳನ್ನು ತೆಗೆದಿಡುವುದು ಉತ್ತಮ.

*ಮದ್ಯ ಸೇವಿಸುವವರು, ಸಿಗರೇಟ್ ಸೇದುವರರು ಉಂಗುರ ಧರಿಸುವುದು ಒಳಿತಲ್ಲ. ಉಂಗುರ ಧರಿಸಿ ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ಮಾಡಬಾರದು. ಈ ನಿಯಮಗಳನ್ನು ಪಾಲಿಸದೆ ದೇವರ ಪ್ರತಿಮೆ ಇರುವ ಉಂಗುರ ಇಟ್ಟುಕೊಂಡರೆ ನಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ