ಇಂದಿನ ರಾಶಿ ಭವಿಷ್ಯ ಹೀಗಿದೆ

ಶನಿವಾರ, 26 ಸೆಪ್ಟಂಬರ್ 2020 (07:42 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಹಳೆಯ ಸ್ನೇಹಿತರ ಜೊತೆಗಿನ ಒಂದು ಪುನರ್ಮಿಲನ ನಿಮ್ಮನ್ನು ಚೇತೋಹಾರಿಯಾಗಿರಿಸುತ್ತದೆ. ನೀವು ಇಂದು ತಾಳ್ಮೆ ಕಳೆದುಕೊಳ್ಳಬಾರದು.
*ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ಯಾವುದೇ ಕೆಲಸ ಹದಗೆಡುವ ಕಾರಣದಿಂದಾಗಿ ಇಂದ ನೀವು ತೊಂದರೆಗೊಳಗಾಗಬಹುದು.
*ಮಿಥುನ ರಾಶಿ : ನೀವು ಯಾವುದೇ ಕಾರ್ಯವನ್ನು ಅಯೋಜಿಸುವುದಾದರೂ ನೀವು ನಂಬಿಕೆಯಿಡಬಹುದಾದ ಜನರ ಸಲಹೆ ಪಡೆಯಿರಿ.
*ಕಟಕ ರಾಶಿ : ಇಂದು ನೀವು ಹಲವಾರು ಒತ್ತಡ ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಹಾಗೂ ಇದು ನಿಮಗೆ ಕಿರಿಕಿರಿಯನ್ನುಂಟುಮಾಡಬಹುದು.
*ಸಿಂಹ ರಾಶಿ : ಇಂದು ನೀವು ಆಪ್ತ ಮತ್ತು ಹಳೆಯ ಸ್ನೇಹಿತನನ್ನು ಭೇಟಿಯಾಗುವ ಮೂಲಕ ಹಿಂದಿನ ಸುವರ್ಣ ದಿನಗಳನ್ನು ನೆನಪಿಸಿಕೊಳ್ಳಬಹುದು.
*ಕನ್ಯಾ ರಾಶಿ : ನಿಮ್ಮ ಸಂಬಂಧಿಕರು ಇಂದು ನಿಮ್ಮ ವೈವಾಹಿಕ ಜೀವನದ ಆನಂದಕ್ಕೆ ಭಂಗ ತರಬಹುದು.
*ತುಲಾ ರಾಶಿ : ನಿಮ್ಮ ಮೂಲಕ ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು. ಹಾಗೇ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಂಡುಬರಹುದು.
*ವೃಶ್ಚಿಕ ರಾಶಿ : ನಿಮ್ಮ ಪ್ರೀತಿ ಪಾತ್ರರ ಭಾವನೆಗಳನ್ನು ಇಂದು ನೀವು ಅರ್ಥಮಾಡಿಕೊಳ್ಳಿ. ಇಲ್ಲವಾದರೆ ಸಂಬಂಧವು ಮುರಿಯಬಹುದು.
*ಧನು ರಾಶಿ : ಮಕ್ಕಳು ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಹಾಗೇ ಇಂದು ನೀವು ಜನರ ನಡುವೆ ಇದ್ದರೂ ಒಂಟಿ ಭಾವನೆ ಕಾಡುತ್ತದೆ.
*ಮಕರ ರಾಶಿ : ಇಂದು ನೀವು ನಿಮ್ಮ ಮನೆಯ ಹಿರಿಯ ಜನರಿಂದ ಹಣವನ್ನು ಉಳಿಸುವ ಬಗ್ಗೆ ಯಾವುದೇ ಸಲಹೆಗಳನ್ನು ತೆಗೆದುಕೊಳ್ಳಬಹುದು.
*ಕುಂಭ ರಾಶಿ : ನೀವು ದೀರ್ಘ ಕಾಲದಿಂದ ಮಾತನಾಡಲು ಬಯಸುತ್ತಿರುವ  ಒಬ್ಬ ವ್ಯಕ್ತಿಯ ಕರೆ ಬರಬಹುದು. ಇದರಿಂದ ಹಳೆಯ ನೆನಪುಗಳು ರಿಫ್ರೆಶ್ ಆಗುತ್ತದೆ.
* ಮೀನ ರಾಶಿ : ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರು ಇಂದು ಉತ್ತಮ ಖರೀದಿದಾರರನ್ನು ಕಾಣಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ