ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 17 ಡಿಸೆಂಬರ್ 2018 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಕಷ್ಟು ಜನರೊಂದಿಗೆ ಒಡನಾಟ ನಡೆಸುವಿರಿ. ಬಯಸಿದ ಕಾರ್ಯ ನಡೆಯುವುದು.

ವೃಷಭ: ಅವಿವಾಹಿತರಿಗೆ ವಿವಾಹ ಸೇರಿದಂತೆ ಮಂಗಲ ಕಾರ್ಯ ನೆರವೇರುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.

ಮಿಥುನ: ಆರೋಗ್ಯದಲ್ಲಿ ವ್ಯತ್ಯಯವಾಗುವುದು. ಮನಸ್ಸಿಗೆ ಏನೋ ಅರಿಯದ ತಳಮಳ ಇರುವುದು. ಕೈ ಹಿಡಿದ ಕಾರ್ಯದಲ್ಲಿ ಲಾಭವಾಗದೇ ಇದ್ದರೂ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಕಾಣುವಿರಿ.

ಕರ್ಕಟಕ: ಹಲವು ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನಡೆಸುವಿರಿ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

ಸಿಂಹ: ಮಹಿಳೆಯರು ಮಾನಸಿಕ ಕಿರಿ ಕಿರಿ ಅನುಭವಿಸುವರು. ವೃತ್ತಿ ರಂಗದಲ್ಲಿ ಪ್ರಯತ್ನವಿದ್ದಲ್ಲಿ ಕಾರ್ಯಸಿದ್ಧಿ. ಕೊಂಚ ನಿರಾಶೆಯಾದರೂ ಪ್ರಯತ್ನ ಬಲದಿಂದ ಕೈ ಹಿಡಿದ ಕಾರ್ಯ ನೆರವೇರುವುದು.

ಕನ್ಯಾ: ದಂಪತಿ ನಡುವೆ ಪರಸ್ಪರ ವಿಶ್ವಾಸ, ಪ್ರೀತಿ ಹೆಚ್ಚಿ ನೆಮ್ಮದಿಯ ವಾತಾವರಣವಿರುವುದು. ದೇವರ ದರ್ಶನಕ್ಕೆ ತೆರಳುವಿರಿ. ಧನ ಲಾಭವಾಗಲಿದೆ.

ತುಲಾ: ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ ಇಂದು ಶುಭವಾರ್ತೆಯಿದೆ. ನಾನಾ ಮೂಲಗಳಿಂದ ಧನ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಅಂದುಕೊಂಡ ರೀತಿಯಲ್ಲಿ ಕೆಲಸ ನೆರವೇರದೇ ಇದ್ದಾಗ ತಾಳ್ಮೆ ಕಳೆದುಕೊಳ್ಳುವಿರಿ. ಆದರೆ ಆದಷ್ಟು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹಾಕಿಕೊಳ‍್ಳುವುದು ಅಗತ್ಯ. ದುಡುಕು ವರ್ತನೆಯಿಂದ ಸಿಕ್ಕ ಅವಕಾಶವನ್ನು ಕೈ ಚೆಲ್ಲಬೇಡಿ.

ಧನು: ದೇಹಾರೋಗ್ಯ ಸುಧಾರಿಸಿ ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಧನ ಲಾಭವಾಗಲಿದೆ. ದೂಋ ಸಂಚಾರ ಕೈಗೊಳ್ಳುವ ಯೋಗವಿದೆ.

ಮಕರ: ಯಾವತ್ತೋ ಮಾಡಬೇಕಿದ್ದ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಇದರಿಂದ ನೆಮ್ಮದಿ ಕಾಣುವಿರಿ. ಆರೋಗ್ಯದ ಬಗ್ಗೆ ಕೊಂಚ ಜಾಗರೂಕತೆ ಅಗತ್ಯ.

ಕುಂಭ: ಮನಸ್ಸಿಗೆ ಕಿರಿ ಕಿರಿಯಾಗಿ ದೇವರ ದರ್ಶನಕ್ಕೆ ಮನಸ್ಸು ಮಾಡುವಿರಿ. ಕುಟುಂಬದಲ್ಲಿ ಸಂಗಾತಿಯ ವಿಶ್ವಾಸ ಗಳಿಸುವಿರಿ. ಇದರಿಂದಾಗಿ ನೆಮ್ಮದಿ ಸಿಗುವುದು.

ಮೀನ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಯಿದೆ. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ. ಆದರೆ ಹಿತಶತ್ರುಗಳ ಮಾತು ಕೇಳಿಬರಬೇಕಾದೀತು. ಹಾಗಿದ್ದರೂ ಅದಕ್ಕೆ ಕಿವಿಗೊಡಬೇಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ