ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 23 ಫೆಬ್ರವರಿ 2019 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯದೊತ್ತಡದಿಂದ ಹೈರಾಣಾಗಲಿದ್ದೀರಿ. ಇದರಿಂದ ಮನೆಯಲ್ಲೂ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮಾಡಿಕೊಳ್ಳುವಿರಿ. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧ ಹಾಳುಮಾಡಿಕೊಳ್ಳಬೇಡಿ. ಹೊಸ ವ್ಯವಹಾರಗಳಿಗೆ ಸದ್ಯಕ್ಕೆ ಕೈ ಹಾಕುವುದು ಬೇಡ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸ್ಥಾನ ಮಾನ ಉತ್ತಮಗೊಳ್ಳುವುದು. ಸಹೋದರರೊಂದಿಗೆ ಮನೆಯಲ್ಲಿ ಮಾಡಬೇಕಾದ ಶುಭ ಕಾರ್ಯಗಳಿಗೆ ಚಾಲನೆ ನೀಡುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಪರಿಹಾರ.

ಮಿಥುನ: ಎಷ್ಟೇ ಹಣ, ಯಶಸ್ಸು, ಕೀರ್ತಿ ಸಂಪಾದಿಸಿದರೂ ಮನಸ್ಸಿಗೆ ಯಾವುದೋ ಚಿಂತೆ ಕಾಡಿ ನೆಮ್ಮದಿ ಇರದು. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.

ಕರ್ಕಟಕ: ಕಾರ್ಯಗಳಿಗೆ ಅಡ್ಡಿ ಕಂಡುಬಂದರೂ ಅಂತಿಮವಾಗಿ ಜಯ ನಿಮ್ಮದಾಗುತ್ತದೆ. ವ್ಯವಹಾರಗಳಲ್ಲಿ ಕೊಂಚ ಚೇತರಿಕೆ ಕಂಡುಬರುತ್ತದೆ. ಮಕ್ಕಳ ಭವಿಷ್ಯಕ್ಕೆ ದಾರಿ ಮಾಡುವಿರಿ. ದೂರ ಸಂಚಾರ ಕೈಗೊಳ್ಳುವಿರಿ.

ಸಿಂಹ: ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುವುದು. ಆದರೆ ಬೇಡದ ಮಾತುಗಳಿಗೆ ಕಿವಿಗೊಡುತ್ತಿದ್ದರೆ ಚಿಂತೆ ಕಾಡುವುದು. ಹಣಕಾಸಿನ ಮುಗ್ಗಟ್ಟುಗಳು ತಲೆದೋರುತ್ತವೆ. ಆದರೆ ಆಪ್ತ ಮಿತ್ರರಿಂದ ಸಕಾಲದಲ್ಲಿ ನೆರವು ದೊರೆಯುವುದು.

ಕನ್ಯಾ: ನಿಮ್ಮದೇ ಉದಾಸೀನ ಪ್ರವೃತ್ತಿ ನಿಮಗೆ ಮುಳುವಾಗಲಿದೆ.  ಕಾರ್ಯದಲ್ಲಿ ವಿಳಂಬ, ವಿಘ್ನಗಳು ಎದುರಾಗುತ್ತವೆ. ಆದರೆ ಆಕಸ್ಮಿಕವಾಗಿ ಧನಾಗಮನವಾಗಲಿದೆ. ವೃತ್ತಿ ಬದಲಾವಣೆ ಬಗ್ಗೆ ಯೋಚನೆ ಮಾಡುವಿರಿ.

ತುಲಾ: ದೈವಾನುಗ್ರಹ ನಿಮ್ಮ ಮೇಲೆ ಇಂದು ಹೆಚ್ಚಾಗಿದೆ. ಹೀಗಾಗಿ ಕಾರ್ಯದಲ್ಲಿ ಜಯ, ಕೀರ್ತಿ ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅತೀವ ಪ್ರಗತಿ ಕಂಡುಬರಲಿದೆ. ಆರೋಗ್ಯ ಭಾಗ್ಯವೂ ಸುಧಾರಿಸುವುದು.

ವೃಶ್ಚಿಕ: ವ್ಯಾಪಾರ, ವ್ಯವಹಾರಗಲ್ಲಿ ಯಶಸ್ಸು. ಆರ್ಥಿಕವಾಗಿ ಚೇತರಿಕೆ ಕಂಡುಬರುತ್ತದೆ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧಗಳು ಕೂಡಿಬರುತ್ತವೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಧನು: ಆರೋಗ್ಯ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗುವುದು. ವಿದ್ಯಾರ್ಥಿಗಳು ತೀವ್ರ ಪ್ರಯತ್ನ ನಡೆಸಬೇಕಾಗುತ್ತದೆ. ಸಂಗಾತಿಯ ಸಹಕಾರ ದೊರೆಯಲಿದೆ. ಶುಭ ಮಂಗಲ ಕಾರ್ಯದ ಏರ್ಪಾಟಿನ ಬಗ್ಗೆ ಚಿಂತನೆ ನಡೆಸುವಿರಿ.

ಮಕರ: ಉತ್ಸಾಹದಿಂದ ನಿಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡರೂ ಅದಕ್ಕೆ ತಕ್ಕ ಯಶಸ್ಸು ಸಿಗದೇ ನಿರಾಸೆಯಾಗಬಹುದು. ಆದರೆ ಧನಾಗಮನಕ್ಕೆ ಕೊರತೆಯಿಲ್ಲ. ತಾಳ್ಮೆಯಿಂದಿದ್ದರೆ ನಿಧಾನವಾಗಿ ಅಭಿವೃದ್ಧಿ ಕಾಣುವಿರಿ.

ಕುಂಭ: ಆದಾಯದಷ್ಟೇ ಖರ್ಚು ವೆಚ್ಚಗಳೂ ಹೆಚ್ಚುವುದು. ಸಹೋದರರ ವಿವಾಹ ಸಂಬಂಧ ಓಡಾಟ ನಡೆಸುವಿರಿ. ಹಿರಿಯರ ಸಲಹೆ ಸೂಚನೆ ಪಡೆದೇ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಮೀನ: ನಿಮ್ಮದೇ ವಿವೇಚನೆಯ ಕೊರತೆಯಿಂದ ಕೆಲವೊಂದು ತಪ್ಪುಗಳಾಗಬಹುದು. ಇದು ನಿಮ್ಮ ಜೀವನದ ದಿಕ್ಕು ಬದಲಾಯಿಸಲಿದೆ. ಮಾತಿಗೆ ಕೊಂಚ ಕಡಿವಾಣ ಹಾಕಿದರೆ ಒಳ್ಳೆಯದು. ತಾಳ್ಮೆಯಿಂದಿದ್ದರೆ ದಿನದಂತ್ಯಕ್ಕೆ ನೆಮ್ಮದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ