ಜಾತಕದಲ್ಲಿ ಈ ದೋಷವಿದ್ದರೆ ವಿಚ್ಛೇದನ ಸಾಧ್ಯತೆ ಹೆಚ್ಚು!

ಬುಧವಾರ, 12 ಡಿಸೆಂಬರ್ 2018 (08:44 IST)
ಬೆಂಗಳೂರು: ಪತಿ-ಪತ್ನಿ ವಿರಸ, ವಿಚ್ಛೇದನ ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ. ದಂಪತಿ ನಡುವೆ ವಿರಸ ಮೂಡಲು, ವಿಚ್ಛೇದನವಾಗಲು ಕಾರಣವಾಗುವ ಜಾತಕದ ದೋಷಗಳೇನು ಗೊತ್ತಾ?


ಹಿಂದೂ ಸಂಪ್ರದಾಯಸ್ಥ ಕುಟುಂಬದವರು ಮದುವೆಗೆ ಮೊದಲು ಜಾತಕವನ್ನು ಪರಾಮರ್ಶಿಸಿಯೇ ಮುಂದುವರಿಯುತ್ತಾರೆ. ಜಾತಕದಲ್ಲಿ ಕುಜ, ರಾಹು, ರವಿ ಮತ್ತು ಶನಿಯ ಸ್ಥಾನ ದಂಪತಿ ನಡುವಿನ ಸರಸ-ವಿರಸಕ್ಕೆ ಮೂಲ ಕಾರಣವಾಗುತ್ತದೆ.

ಈ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ಪತಿ-ಪತ್ನಿಯರ ನಡುವಿನ ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ ಎಂದು ನಿರ್ಧಾರವಾಗುತ್ತದೆ. ಕುಜ, ರಾಹು ಅಥವಾ ಶನಿ ಎಂಟನೇ ಮನೆಯಲ್ಲಿದ್ದರೆ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಶನಿ ಬೇಗನೇ ವಿಚ್ಛೇದನ ಸಿಗದಂತೆ ಮಾಡುತ್ತಾನೆ. ಇಂತಹ ಸಂದರ್ಭದಲ್ಲಿ ಸಂಬಂಧಗಳಲ್ಲಿ ನೋವು, ವಿರಸ ಹೆಚ್ಚಿರುತ್ತದೆ. ರವಿ ದಾಂಪತ್ಯ ಜೀವನದ ಖುಷಿ-ವಿರಸವನ್ನು ನಿರ್ಧರಿಸಲು ಪ್ರಮುಖನಾಗುತ್ತಾನೆ. ಈ ಅಂಶಗಳನ್ನು ಜಾತಕದಲ್ಲಿ ಗಮನಿಸಿ ಮುಂದುವರಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ