ದೇವರ ಬಗ್ಗೆ ತಪ್ಪಾಗಿ ಮಾತಾಡಿಲ್ಲ: ನಟಿ ಶ್ವೇತಾ ತಿವಾರಿ

ಶನಿವಾರ, 29 ಜನವರಿ 2022 (08:32 IST)
ಮುಂಬೈ: ದೇವರು ನನ್ನ ಬ್ರಾ ಸೈಝ್ ತೆಗೆದುಕೊಳ್ತಿದ್ದಾರೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಒಳ ಉಡುಪಿನ ವಿಚಾರದಲ್ಲಿ ದೇವರನ್ನು ಎಳೆದು ತಂದು ವಿವಾದಕ್ಕೀಡಾದ ನಟಿ ವಿರುದ್ಧ ಭೋಪಾಲ್ ನಲ್ಲಿ ಎಫ್ ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಶ್ವೇತಾ ಕ್ಷಮೆ ಯಾಚಿಸಿದ್ದಾರೆ.

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬೇಸರವಿದೆ. ನಾನು ದೇವರ ಮೇಲೆ ನಂಬಿಕೆ ಹೊಂದಿದ್ದೇನೆ. ಜನರ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶ ಹೊಂದಿರಲಿಲ್ಲ. ಹಾಗಿದ್ದರೂ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ’ ಎಂದು ಶ್ವೇತಾ ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ