ಶ್ರೀದೇವಿ ಸಾವಿನ ವರದಿ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಸೆಲೆಬ್ರಿಟಿಗಳ ಕಿಡಿ

ಬುಧವಾರ, 28 ಫೆಬ್ರವರಿ 2018 (09:35 IST)
ಮುಂಬೈ: ಬಾಲಿವುಡ್ ತಾರೆ ಶ್ರೀದೇವಿ ಸಾವಿನ ಬಗ್ಗೆ ತಮಗೆ ತೋಚಿದಂತೆ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಸ್ಟಾರ್ ನಟರು ಕಿಡಿ ಕಾರಿದ್ದಾರೆ.
 

ಶ್ರೀದೇವಿ ಸಾವಿನ ಬಗ್ಗೆ ಇದ್ದ ನಿಗೂಢತೆಗಳ ಕುರಿತು ತಮ್ಮದೇ ರೀತಿಯಲ್ಲಿ ವರದಿ ಮಾಡಿದ ಮಾಧ್ಯಮಗಳ ಮೇಲೆ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ತಾರೆಗಳು ಕಿಡಿ ಕಾರಿದ್ದಾರೆ.

ಬಾಲಿವುಡ್ ನಿರ್ದೇಶಕ ಫರ್ಹಾನ್ ಅಖ್ತರ್ ಭಾರತೀಯ ಮಾಧ್ಯಮಗಳ ವರದಿ ಅಮಾನವೀಯ ಎಂದು ಬಣ್ಣಿಸಿದರೆ, ವಿದ್ಯಾ ಬಾಲನ್, ನೇರ ಪ್ರಸಾರದ ವರದಿಗಳೇ ಶ್ರೀದೇವಿಯನ್ನು ಕೊಂದವು ಎಂದಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಪ್ರೀತಿಯಿಂದ ವರದಿ ಮಾಡಿ. ಇದೊಂದೇ ನಿಮ್ಮ ತಪ್ಪಿಗೆ ಪ್ರಾಯಶ್ಚಿತ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ