ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ರೋಲ್ ಆದ ನಟ ಸಲ್ಮಾನ್ ಖಾನ್

ಶನಿವಾರ, 25 ಆಗಸ್ಟ್ 2018 (16:52 IST)
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸುವುದರ ಕುರಿತು  ಟ್ರೋಲ್ ಆಗಿದ್ದಾರೆ.


ನಟ ಸಲ್ಮಾನ್ ಖಾನ್ ಅವರು ವಾಜಪೇಯಿ ನಿಧನರಾದ ದಿನದಂದು ಸಂತಾಪ ಸೂಚಿಸುವ ಬದಲು 5 ದಿನದ ನಂತರ ಅದ್ಭುತ ನಾಯಕ, ರಾಜಕಾರಣದ ಮುತ್ಸದ್ಧಿ, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟು ದೊಡ್ಡ ಪ್ರಪಂಚದಲ್ಲಿ ಆಧುನಿಕ ಸಂವಹನ ಮಾಧ್ಯಮಗಳಿಂದ ಅತಿ ಚಿಕ್ಕ ಸುದ್ದಿಯೂ ಕ್ಷಣಮಾತ್ರದಲ್ಲಿ ಹರಿದಾಡಿ ಎಲ್ಲರನ್ನು ತಲುಪುತ್ತದೆ. ಆದರೆ ಬಾಲಿವುಡ್ ನಾಯಕನಿಗೆಇಷ್ಟು ಲೇಟಾಗಿ ಯಾಕೆ ಗೊತ್ತಾಯಿತು ಎಂದು ಟ್ರೋಲಿಗರು ನಟ ಸಲ್ಮಾನ್ ಖಾನ್ ಅವರಿಗೆ ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ