ಮದುವೆ ಕ್ಯಾನ್ಸಲ್ ಮಾಡಿ ಕೇರಳದ ಸಂತ್ರಸ್ತರ ನೆರವಿಗೆ ಧಾವಿಸಿದ ನಟ ಯಾರು ಗೊತ್ತಾ?

ಬುಧವಾರ, 22 ಆಗಸ್ಟ್ 2018 (07:06 IST)
ತಿರುವನಂತಪುರಂ : ಕೇರಳದ ಸಂತ್ರಸ್ತರಾಗಿ ಸಾಕಷ್ಟು ನಟ-ನಟಿಯರು ಹಣದ ಸಹಾಯ ಮಾಡಿದ್ದಾರೆ. ಆದರೆ ಇದೀಗ ಮಲೆಯಾಳಂ ನಟರೊಬ್ಬರು ತಮ್ಮ ಮದುವೆಯನ್ನೇ ಮುಂದೂಡಿ ತಾವೇ ಖುದ್ದಾಗಿ  ಕೇರಳದ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.


ಹೌದು. ಮಲೆಯಾಳಂ ನಟ ರಾಜೀವ್ ಪಿಳ್ಳೈ ತಮ್ಮ ತಾಯ್ನಾಡಿನ ನೆಲದ ಸಂಭವಿಸಿದ ನೋವನ್ನು ಕಂಡು  ಸದ್ಯದಲ್ಲೇ  ನಡೆಯಬೇಕಿದ್ದ ತಮ್ಮ ಮದುವೆಯನ್ನು ಮುಂದೂಡಿ ಇದೀಗ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಈಗಾಗಲೇ ಮದುವೆಯನ್ನು ಮುಂದೂಡಿರೋ ರಾಜೀವ್ ಇದೀಗ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಕಡಿಮೆ ಪ್ರವಾಹ ಪೀಡಿತ ಸ್ಥಳಕ್ಕೆ ಬೋಟ್ ​ಗಳನ್ನು ತರುವ ಕೆಲಸವನ್ನು ಮಾಡುತ್ತಿದ್ದಾರೆ.


ರಾಜೀವ್​​​ ಬೋಟ್​ ಎಳೆದು ತರುವ ಪೋಟೋವನ್ನು ಶಕೀಲಾದ ಸಹ ನಟಿ ರಿಚಾ ಚಾಧಾ ಪೋಸ್ಟ್​​ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ