ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ಯಾಕೆ?

ಗುರುವಾರ, 2 ಆಗಸ್ಟ್ 2018 (07:22 IST)
ಹೈದರಾಬಾದ್ : ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕಾಗಿ ನಿರ್ಮಿಸಿದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರಂತೆ.


ಬಿಗ್​ ಬಜೆಟ್​ನಲ್ಲಿ ನಿರ್ಮಿಸಲಾಗುತ್ತಿರುವ ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸಿರಿಲಿಂಗಂಪಲ್ಲಿ ಎಂಬಲ್ಲಿ ನಡೆಯುತ್ತಿತ್ತು. ಚಿತ್ರದ ಶೂಟಿಂಗ್ ಗಾಗಿ  ಬಿಗ್​ ಸೆಟ್ ಕೂಡ ನಿರ್ಮಿಸಲಾಗಿತ್ತು. ಆದರೆ, ಆ ಸ್ಥಳದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಆದಾಯ ಇಲಾಖೆಯ ಅನುಮತಿ ಪಡೆಯದ ಕಾರಣ ಇಲಾಖೆಯ  ಅಧಿಕಾರಿಗಳು ಶೂಟಿಂಗ್​ ಸೆಟ್ ಅನ್ನು ನೆಲಸಮ ಮಾಡಿದ್ದಾರಂತೆ.


ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಈ ಹಿಂದೆ ರಂಗಸ್ಥಳಂ ಚಿತ್ರದ ಶೂಟಿಂಗ್​ ಇದೇ ಜಾಗದಲ್ಲಿ ನಡೆದಿತ್ತು. ಅಂದು ಅನುಮತಿ ಪಡೆಯಲಾಗಿತ್ತು. ಆದರೆ, ಸದ್ಯ ನಡೆಯುತ್ತಿರುವ ಶೂಟಿಂಗ್​ಗೆ ಹೊಸ ಅನುಮತಿ ಪಡೆದಿಲ್ಲ” ಎಂದಿದ್ದಾರೆ. ಆದರೆ ಚಿತ್ರದ ನಿರ್ಮಾಪಕರು, ‘ಈ ಜಮೀನನ್ನು ಮಾಲೀಕನಿಂದ ಲೀಸ್​ಗೆ ಪಡೆದಿದ್ದೇವೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ