ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ?

ಶುಕ್ರವಾರ, 3 ಜುಲೈ 2009 (19:43 IST)
ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸದಾಗಿ 8 ರೈಲುಗಳು ಮಂಜೂರಾಗಿದ್ದು, 4 ರೈಲುಗಳ ಓಡಾಟವನ್ನು ವಿಸ್ತರಿಸಲಾಗಿದೆ ಮತ್ತು ವಾರಕ್ಕೆ ಮೂರು ಬಾರಿ ಓಡುತ್ತಿದ್ದ ಚೆನ್ನೈ-ಮಂಗಳೂರು ರೈಲನ್ನು ದಿನಂಪ್ರತಿಗೆ ಪರಿವರ್ತಿಸಲಾಗಿದೆ. ಕರ್ನಾಟಕಕ್ಕೆ ಏನೇನು ದಕ್ಕಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ:

ರಾಜ್ಯಕ್ಕೆ ಹೊಸದಾಗಿ ಲಭ್ಯವಾದ ರೈಲುಗಳು:

1. ಬೆಂಗಳೂರು - ಹುಬ್ಬಳ್ಳಿ - ಸೋಲಾಪುರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)

2. ಹೌರಾ - ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)

3. ಮುಂಬೈ - ಕಾರವಾರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)

4. ಹಜ್ರತ್ ನಿಜಾಮುದ್ದೀನ್ - ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ವಯಾ ಕಾಚಿಗುಡ (ವಾರಕ್ಕೆ ಮೂರು)

5. ಮೈಸೂರು-ಯಶವಂತಪುರ ಎಕ್ಸ್‌ಪ್ರೆಸ್ (ದೈನಿಕ)

6. ಲಕ್ನೋ - ರಾಯ್‌ಬರೇಲಿ-ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)

7. ಶಿವಮೊಗ್ಗ - ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ದೈನಿಕ)

8. ಬೆಂಗಳೂರು -ಕೋಚುವೇಲಿ ಸೂಪರ್ ಫಾಸ್ಟ್ (ಸಾಪ್ತಾಹಿಕ).

ಕರ್ನಾಟಕಕ್ಕೆ ಸಂಬಂಧಿಸಿ ವಿಸ್ತರಣೆಯಾದ ರೈಲುಗಳು:

ಬೆಂಗಳೂರು-ಮಂಗಳೂರು ದೈನಿಕ ರೈಲು ಕಣ್ಣೂರುವರೆಗೆ

ಮೈಸೂರು-ತಿರುಪತಿ ದೈನಿಕ ರೈಲು ಚಾಮರಾಜ ನಗರಕ್ಕೆ

ಮಂಗಳೂರು-ಚೆನ್ನೈ ಸಾಪ್ತಾಹಿಕ ರೈಲು ಪುದುಚೇರಿವರೆಗೆ

ಬೆಂಗಳೂರು-ಹುಬ್ಬಳ್ಳಿ ಇಂಟರ್‌ಸಿಟಿ ದೈನಿಕ ರೈಲು ಧಾರವಾಡಕ್ಕೆ

ರಾಜ್ಯಕ್ಕೆ ಸಂಬಂಧಿಸಿ ಓಡಾಟ ವಿಸ್ತರಣೆಯಾದ ರೈಲು:

ಚೆನ್ನೈ-ಮಂಗಳೂರು ವಾರಕ್ಕೆ ಮೂರು ದಿನ ಇದ್ದದ್ದು ಪ್ರತಿ ದಿನ ಓಡಲಿದೆ

ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆ:

ಕೊಟ್ಟೂರು-ಹರಿಹರ ಯೋಜನೆ

ಹಳಿ ದ್ವಿಗುಣಗೊಳಿಸುವ ಯೋಜನೆ:

ಯಶವಂತಪುರ-ಯಲಹಂಕ, ಯಲಹಂಕ-ಚೆನ್ನಸಂದ್ರ

ಹೊಸ ಮಾರ್ಗ ನಿರ್ಮಾಣದ ಅಂಗೀಕಾರಕ್ಕೆ ಮಮತಾ ಬ್ಯಾನರ್ಜಿ ಶಿಫಾರಸು ಮಾಡಿರುವ ಪ್ರಸ್ತಾವನೆಗಳು:

ಚಿಕ್ಕಬಳ್ಳಾಪುರ-ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ

ಆಲಮಟ್ಟಿ-ಕೊಪ್ಪಳ

ಯಾದಗಿರ್ - ಶಹಾಪುರ - ಶೋರಾಪುರ - ಮದ್ದೇಬಿಹಾಳ-ಆಲಮಟ್ಟಿ

ಗದಗ-ಹಾವೇರಿ

ಗದಗ-ವಾಡಿ

ಗದಗ-ಹಾವೇರಿ

ಶಿವಮೊಗ್ಗ-ಹರಿಹರ

ಆನೆಕಲ್ ರೋಡ್ - ಬಿಡದಿ

ನಾಂದೇಡ್-ಬೀದರ್

* ಗುಂತಕಲ್-ಗುಟಿ-ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಯೋಜನೆಗೆ ಸರ್ವೇ ನಡೆಸಲಾಗುತ್ತದೆ.

* ಬೆಂಗಳೂರು ನಗರ, ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಮಂಗಳೂರು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುತ್ತದೆ.

* ಆದರ್ಶ ನಿಲ್ದಾಣಗಳನ್ನಾಗಿ ಪರಿವರ್ತಿಸುವ ದೇಶದ ಒಟ್ಟು 375 ನಿಲ್ದಾಣಗಳಲ್ಲಿ ಬೇಲೂರು, ಬೀದರ್, ಶಿವಾಜಿನಗರ, ಸಾಗರ ನಿಲ್ದಾಣಗಳು ಸೇರಿವೆ.

* ಕರ್ನಾಟಕದ ಹುಬ್ಬಳ್ಳಿ, ಮೈಸೂರು ಸಹಿತ ದೇಶದಲ್ಲಿ 49 ರೈಲು ನಿಲ್ದಾಣಗಳಲ್ಲಿ ಶಾಪಿಂಗ್, ಆಹಾರವಸ್ತು, ರೆಸ್ಟೋರೆಂಟ್, ಬುಕ್ ಸ್ಟಾಲ್, ಟೆಲಿಫೋನ್ ಬೂತ್, ಔಷಧ, ಬಜೆಟ್ ಹೋಟೆಲ್‌ಗಳು, ಅಂಡರ್‌ಗ್ರೌಂಡ್ ಪಾರ್ಕಿಂಗ್ ಮುಂತಾದ ವ್ಯವಸ್ಥೆಯುಳ್ಳ ಬಹು ಕಾರ್ಯ ಸಂಕೀರ್ಣಗಳ ಸ್ಥಾಪನೆ.

* ದೀರ್ಘ ದೂರ ಪ್ರಯಾಣಿಸುವ ರೈಲುಗಳಲ್ಲಿ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಕವಾಗಿ ಅಳವಡಿಸುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಉಳಿದವೆಂದರೆ ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತಾ ಮತ್ತು ಭುವನೇಶ್ವರ.

* ಈಗಿರುವ ರೈಲ್ವೇ ಆಸ್ಪತ್ರೆಗಳಿಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಹೊಸದಾಗಿ ಮೆಡಿಕಲ್ ಕಾಲೇಜುಗಳನ್ನು ಸೇರಿಸಲಾಗುತ್ತಿದ್ದು, ಮೈಸೂರಿನ ರೈಲ್ವೇ ಇಲಾಖೆ ನೌಕರರಿಗೂ ಈ ಸೌಲಭ್ಯ ಒದಗಿ ಬರಲಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ದೋಝಪುರ, ಅಹಮದಾಬಾದ್, ನಾಗ್ಪುರ, ಜಮ್ಮು, ತಿರುವನಂತಪುರಂ, ಗುವಾಹಟಿ ಮುಂತಾದ ಸ್ಥಳಗಳಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ.

* ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಸಿಕಂದರಾಬಾದ್ ರೈಲ್ವೇ ಆಸ್ಪತ್ರೆಗಳಲ್ಲಿ ಸುಟ್ಟ ಗಾಯ ಚಿಕಿತ್ಸಾ ಘಟಕಗಳ ಸ್ಥಾಪನೆ.

* ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯು 2007-08ಕ್ಕೆ ಹೋಲಿಸಿದರೆ, 1,96,261 ಗಾಲಿಗಳನ್ನು ಉತ್ಪಾದಿಸುವ ಮೂಲಕ 2008-09ರಲ್ಲಿ ಅದ್ಭುತವಾದ ಶೇ.35 ಏಳಿಗೆ ದಾಖಲಿಸಿದೆ. 20009-10ರ ಉತ್ಪಾದನಾ ಗುರಿ 2,00,000 ಗಾಲಿಗಳು.

ವೆಬ್ದುನಿಯಾವನ್ನು ಓದಿ