ಚಿಕ್ಕಮಗಳೂರಿನಲ್ಲಿ ಜನತಾ ಕರ್ಪ್ಯೂ ವೀಕ್ಷಣೆ ಮಾಡಿದ ಸಚಿವ ಸಿಟಿ ರವಿ

ಭಾನುವಾರ, 22 ಮಾರ್ಚ್ 2020 (09:42 IST)
ಚಿಕ್ಕಮಗಳೂರು : ಕೊರೊನಾ ಸೋಂಕು ತಡೆಗೆ ಜನತಾ ಕರ್ಪ್ಯೂ ಹಿನ್ನಲೆ ಚಿಕ್ಕಮಗಳೂರಿನಲ್ಲಿ ಜನತೆ ಬೆಂಬಲ ಸೂಚಿಸಿದ್ದು, ಸಚಿವ ಸಿಟಿ ರವಿ ವೀಕ್ಷಣೆ ಮಾಡಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತಲು ಸಚಿವ ಸಿಟಿ ರವಿ ಬೆಳ್ಳಂಬೆಳಿಗ್ಗೆ ಸೈಕಲ್ ಸವಾರಿ ಮಾಡಿದ್ದಾರೆ. ಜನತಾ ಕರ್ಪ್ಯೂ ಗೆ ಜನರು ಹೇಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಬಗ್ಗೆ ವೀಕ್ಷಣೆ ಮಾಡಿದ್ದಾರೆ.


ಚಿಕ್ಕಮಗಳೂರಿನ ಹಲವು ಕಡೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜನರು ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ