ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹೊರನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅರೆಸ್ಟ್ ಕೊಹ್ಲಿ ಎಂಬ ಎಕ್ಸ್ನಲ್ಲಿ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ನಲ್ಲಿದೆ.
#ArrestKohli ಮತ್ತು #ShameOnRCB ಹ್ಯಾಶ್ಟ್ಯಾಗ್ಗಳು ಕಳೆದ 24 ಗಂಟೆಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಟ್ರೆಂಡಿಂಗ್ ಆಗಿವೆ.
ಕೋಪಗೊಂಡ ಐಪಿಎಲ್ ಅಭಿಮಾನಿಗಳ ಒಂದು ವಿಭಾಗವು ಫ್ರಾಂಚೈಸಿಯನ್ನು ದೂರವಿಡುವ ಮೂಲಕ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಯನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದೆ.
18 ವರ್ಷಗಳ ಕಠಿಣ ಕಾಯುವಿಕೆಯ ನಂತರ ಆರ್ಸಿಬಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಮರುದಿನವೇ ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತು. ಇದರಲ್ಲಿ 11 ಮಂದಿ ಸಾವನ್ನಪ್ಪಿ, 56 ಮಂದಿ ಗಂಬೀರ ಗಾಯಗೊಂಡಿದ್ದರು. ತಮ್ಮ ಪ್ರೀತಿಯ ಫ್ರಾಂಚೈಸ್ ಗೆಲುವನ್ನು ವೀಕ್ಷಿಸಲು ವರ್ಷಗಳ ಕಾಲ ಕಾಯುತ್ತಿದ್ದ ಅಭಿಮಾನಿಗಳಿಗೆ ಆಚರಣೆಯು ದುರಂತದೊಂದಿಗೆ ಅಂತ್ಯವಾಯಿತು.
ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಇದಕ್ಕೆ ಯಾರು ಹೊಣೆ? ತಂಡ? ಆಟಗಾರರು? ಫ್ರಾಂಚೈಸಿ? ಸಂಘಟಕರು? ಕ್ರಿಕೆಟ್ ಮಂಡಳಿ? ಪೊಲೀಸರೇ? ಸರ್ಕಾರವೇ? ಜನಸಂದಣಿ ನಿಯಂತ್ರಣ, ಸಮನ್ವಯ ಮತ್ತು ಹೊಣೆಗಾರಿಕೆಯಲ್ಲಿನ ಲೋಪಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಒಳಗಾಯಿತು.
ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ನಂತರ ವಿರಾಟ್ ಕೊಹ್ಲಿ ವಿರುದ್ಧ ಯಾಕಿಲ್ಲ ಕ್ರಮ ಎಂಬ ಬಿಸಿ ಚರ್ಚೆ ಹುಟ್ಟುಕೊಂಡಿದೆ.
ವಿರಾಟ್ ಕೊಹ್ಲಿ ಅವರು ಮೃತ ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿದ್ದಾರಾ. ನಿಷ್ಠಾವಂತ ಅಭಿಮಾನಿಗಳ ಕುಟುಂಬಗಳನ್ನು ಭೇಟಿ ಮಾಡಲು ಲಂಡನ್ಗೆ ಪ್ರಯಾಣವನ್ನು ವಿಳಂಬ ಮಾಡಬಹುದಿತ್ತಾಲ್ವ. ಅವರು ಹೀಗೇ ನಡೆದುಕೊಳ್ಳಲು ಹೇಗೇ ಸಾಧ್ಯ. ಅವರು ಜಾಹೀರಾತುಗಳಿಗಾಗಿ ದೀಪಾವಳಿಯ ಸಮಯದಲ್ಲಿ ಮಾತ್ರ ಅವರು ತಮ್ಮ ಮಾನವೀಯತೆಯನ್ನು ತೋರಿಸುತ್ತಾರೆಯೇ ಎಂದು ವಿರಾಟ್ ಕೊಹ್ಲಿ ನಡವಳಿಕೆ ವಿರುದ್ಧ ಕಿಡಿಕಾರಿದ್ದಾರೆ.
"ಅವರು ಫ್ರಾಂಚೈಸ್ ಲೀಗ್ ಪ್ರಶಸ್ತಿಯನ್ನು ಗೆದ್ದಾಗ ಕಣ್ಣೀರು ಹಾಕಿದರು. ಆದರೆ ಅವರ ಅಭಿಮಾನಿ ನಿಧನರಾದಾಗ ಅವರ ಕಣ್ಣೀರು ಎಲ್ಲಿತ್ತು? ವಿರಾಟ್ ಕೊಹ್ಲಿ, ನೀವು ನಮ್ಮ ಹೃದಯದಿಂದ ಎಲ್ಲಾ ಗೌರವವನ್ನು ಕಳೆದುಕೊಂಡಿದ್ದೀರಿ. ಲಂಡನ್ಗೆ ಬೇಗನೆ ಹೊರಡುವ ಅವರ ನಿರ್ಧಾರದ ಕೇವಲ bcz ನಿಷ್ಠಾವಂತ ಅಭಿಮಾನಿಗಳ ಜೀವವನ್ನು ಬಲಿ ತೆಗೆದುಕೊಂಡಿತು ???? RCB ಗೆ ನಾಚಿಕೆಯಾಗಬೇಕು ಎಂಬ ಹ್ಯಾಶ್ಟ್ಯಾಗ್ ಜೋರಾಗಿದೆ.