ಟೀಂ ಇಂಡಿಯಾ ಸೋಲಿಸಿದ ಬಳಿಕ ಕ್ರಿಕೆಟಿಗರಿಗೆ ಈ ಮನವಿ ಮಾಡಿದ್ದ ಪಾಕ್ ನಾಯಕ ಬಾಬರ್

ಮಂಗಳವಾರ, 26 ಅಕ್ಟೋಬರ್ 2021 (11:29 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಭಾರತದ ಎದುರು ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ತಂಡದ ಆಟಗಾರರಿಗೆ ಮನವಿಯೊಂದನ್ನು ಮಾಡಿದ್ದಾರೆ.

ಸಾಮಾನ್ಯವಾಗಿ ಉಭಯ ದೇಶಗಳ ನಡುವಿನ ಕಾದಾಟದಲ್ಲಿ ಯಾರೇ ಗೆದ್ದರೂ ಆಯಾ ದೇಶದಲ್ಲಿ ಸಂಭ್ರಮ ಮೇರೆ ಮೀರಿರುತ್ತದೆ. ಆದರೆ ಇಷ್ಟಕ್ಕೇ ಕೊನೆ ಎಂದು ಅತಿಯಾಗಿ ಸಂಭ್ರಮಿಸುವುದು ಬೇಡ ಎಂದು ಬಾಬರ್ ಅಜಮ್ ತಮ್ಮ ಸಹ ಆಟಗಾರರಿಗೆ ಹೇಳಿದ್ದಾರೆ.

ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯವಷ್ಟೇ. ಇನ್ನೂ ನಾವು ಸಾಗಬೇಕಾದ ದಾರಿ ಸಾಕಷ್ಟಿದೆ. ಇಷ್ಟಕ್ಕೇ ಟೂರ್ನಿ ಗೆದ್ದವರಂತೆ ಅತಿಯಾದ ಆತ್ಮವಿಶ್ವಾಸ ಮತ್ತು ಸಂಭ್ರಮಿಸುವುದು ಬೇಡ ಎಂದು ಬಾಬರ್ ಕಿವಿ ಮಾತು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ