ಬೆಂಗಳೂರಲ್ಲಿಂದು ಬಿಸಿಸಿಐ ಮಾಜಿ ಅಧ್ಯಕ್ಷರ ಗುಪ್ತ ಸಭೆ!

ಶುಕ್ರವಾರ, 6 ಜನವರಿ 2017 (09:20 IST)
ಬೆಂಗಳೂರು: ಬಿಸಿಸಿಐನ ದೊರೆಗಳು ಇದೀಗ ದಿಕ್ಕೆಟ್ಟುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಹಲವು ಉನ್ನತ ಅಧಿಕಾರಿಗಳು ಸ್ಥಾನ ಪಡೆದುಕೊಳ್ಳಲು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಇಂದು ಬೆಂಗಳೂರಿನಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ.

ಬಿಸಿಸಿಐನಲ್ಲಿ ಸ್ಥಾನ ಕಳೆದುಕೊಂಡವರೆಲ್ಲರೂ ಭಾಗವಹಿಸುವ ಸಾಧ್ಯತೆಯಿದೆ. ಬಿಸಿಸಿಐನಲ್ಲಿ ತಮ್ಮ ಮಂದಿನ ಭವಿಷ್ಯವೇನು, ಶ್ರೀಮಂತ ಕ್ರಿಕೆಟ್ ಮಂಡಳಿಯ ಮುಂದಿನ ನಡೆಗಳ ಬಗ್ಗೆ ಇದರಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಬಹುತೇಕ ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ದಿಕ್ಕು ತಪ್ಪಿದಂತಾಗಿದೆ.  ಅಧಿಕಾರದಲ್ಲಿದ್ದ ದೊಡ್ಡ ತಲೆಗಳು ದಿಕ್ಕೆಟ್ಟು ಕೂತಿವೆ. ಈ ಹಿನ್ನಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಬಿಸಿಸಿಐನಿಂದ ಹೊರ ಬಿದ್ದವರೆಲ್ಲಾ ಸಭೆ ಸೇರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ