ಏಕದಿನ ವಿಶ್ವಕಪ್: ಟೀಂ ಇಂಡಿಯಾದಲ್ಲಿ ನಾಳೆ ಬದಲಾವಣೆ ಇರಲ್ಲ? ಸುಳಿವು ನೀಡಿದ ದ್ರಾವಿಡ್

ಶನಿವಾರ, 11 ನವೆಂಬರ್ 2023 (17:18 IST)
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ನಾಳೆ ಕೊನೆಯ ಲೀಗ್ ಪಂದ್ಯವಾಡಲಿದೆ. ಈ ಪಂದ್ಯ ಭಾರತ ಔಪಚಾರಿಕವಾಗಿದೆ.

ಹಾಗಿದ್ದರೂ ನಾಳೆಯ ಪಂದ್ಯಕ್ಕೆ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆಯಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ.

‘ಇದೀಗ ನಿರ್ಣಾಯಕ ಹಂತದಲ್ಲಿದ್ದೇವೆ. ನಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಯಾವುದು, ಅವರನ್ನು ಮುಂದಿನ ಮಹತ್ವದ ಪಂದ್ಯಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಿ ಮಾಡುವುದರ ಕಡೆಗೆ ನಮ್ಮ ಗಮನವಿರಲಿದೆ. ಸದ್ಯಕ್ಕೆ ನಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸುವುದರ ಬಗ್ಗೆಯೇ ನಾವು ಗಮನ ಕೇಂದ್ರೀಕರಿಸಲಿದ್ದೇವೆ’ ಎಂದಿದ್ದಾರೆ. ಹೀಗಾಗಿ ನಾಳೆಯ ಪಂದ್ಯಕ್ಕೆ ಆಡುವ ಬಳಗದಲ್ಲಿ ಬದಲಾವಣೆ ಸಾಧ‍್ಯತೆ ಕಡಿಮೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ