ರವೀಂದ್ರ ಜಡೇಜಾ ಮೇಲೆ ಧೋನಿ ಬಾಸ್ ಗಿರಿಯೇ ಸೋಲಿಗೆ ಕಾರಣವಾ?!

ಮಂಗಳವಾರ, 5 ಏಪ್ರಿಲ್ 2022 (09:00 IST)
ಮುಂಬೈ: ಐಪಿಎಲ್ ನಲ್ಲಿ ಯಾವತ್ತೂ ಪ್ರಬಲ ತಂಡವೆಂದೇ ಪರಿಗಣಿಸಲ್ಪಡುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಆಡಿದ ಮೂರೂ ಪಂದ್ಯಗಳನ್ನು ಸೋತು ನಿರಾಶೆಯಲ್ಲಿದೆ.

ಈ ಐಪಿಎಲ್ ಗೆ ಎರಡು ದಿನ ಬಾಕಿಯಿರುವಾಗ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದರೆ ಜಡೇಜಾಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಜಡೇಜಾ ನಾಯಕರಾದರೂ ಧೋನಿ ಈಗಲೂ ಸೂಪರ್ ಕ್ಯಾಪ್ಟನ್ ಆಗಿ ತಂಡದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಈ ಬಗ್ಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮಾತನಾಡಿದ್ದು, ಜಡೇಜಾ ಮೇಲೆ ಧೋನಿ ಬಾಸ್ ಗಿರಿಯೇ ಅವರಿಗೆ ಮುಳುವಾಗುತ್ತಿದೆ ಎಂದು ಟೀಕಿಸಿದ್ದಾರೆ.  ಇದಕ್ಕೆ ತಾಜಾ ಉದಾಹರಣೆಯೆಂದರೆ ಲಕ್ನೋ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಶಿವಂ ದುಬೆಗೆ ಅಂತಿಮ ಹಂತದಲ್ಲಿ ಬೌಲಿಂಗ್ ಮಾಡಲು ಹೇಳಿದ್ದು ಧೋನಿ. ಆದರೆ ದುಬೆ ಯರ್ರಾ ಬಿರ್ರಿ ರನ್ ನೀಡಿ ಸಿಎಸ್ ಕೆ ಸೋಲಿಗೆ ಕಾರಣರಾದರು. ಮೈದಾನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಇನ್ನೂ ಜಡೇಜಾಗಿಲ್ಲ. ಈ ಗೊಂದಲಗಳಿಂದಾಗಿಯೇ ಸಿಎಸ್ ಕೆ ಸೋಲುತ್ತಿದೆ ಎನ್ನುವುದು ಜಡೇಜಾ ಮಾತು. ಹಲವರು ಇದೇ ಅಭಿಪ್ರಾಯ ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ