ಐಪಿಎಲ್ ಗೂ ಮೊದಲು ಶಾಕ್: ನಾಯಕತ್ವ ತ್ಯಜಿಸಿದ ಧೋನಿ, ಜಡೇಜಾಗೆ ಪಟ್ಟ

ಗುರುವಾರ, 24 ಮಾರ್ಚ್ 2022 (16:48 IST)
ಮುಂಬೈ: ಐಪಿಎಲ್ 2022 ಆರಂಭವಾಗಲು ಎರಡೇ ದಿನ ಬಾಕಿಯಿರುವಾಗ ಚೆನ್ನೈ  ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ಧೋನಿ ರಾಜೀನಾಮೆ ನೀಡಿದ್ದಾರೆ. ತಮ್ಮ ಬದಲು ರವೀಂದ್ರ ಜಡೇಜಾಗೆ ನಾಯಕತ್ವ ನೀಡಿದ್ದಾರೆ.

ಈ ಬಗ್ಗೆ ಚೆನ್ನೈ ತಂಡ ಅಧಿಕೃತ ಪ್ರಕಟಣೆ ನೀಡಿದ್ದು, ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಉಂಟು ಮಾಡಿದೆ. ಧೋನಿ ನಾಯಕತ್ವ ತ್ಯಜಿಸಿದ್ದು, ಈ ಋ‍ತುವಿನಲ್ಲಿ ಮತ್ತು ನಂತರವೂ ತಂಡದ ಜೊತೆಗಿರಲಿದ್ದಾರೆ ಎಂದು ಸಿಎಸ್ ಕೆ ಪ್ರಕಟಿಸಿದೆ.

ಧೋನಿಯೇ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ನಾಯಕನಾಗಿ ನೇಮಿಸಲು ಸೂಚಿಸಿದ್ದಾರೆ ಎಂದು ಸಿಎಸ್ ಕೆ ಹೇಳಿದೆ. ಹೀಗಾಗಿ ಈ ಕೂಟದಲ್ಲಿ ಜಡೇಜಾ ಚೆನ್ನೈ ತಂಡದ ನಾಯಕರಾಗಲಿದ್ದಾರೆ.

ಐಪಿಎಲ್ ನಲ್ಲಿ ಆರಂಭದಿಂದಲೂ ಚೆನ್ನೈ ತಂಡದ ಭಾಗವಾಗಿರುವ ಧೋನಿ, ಒಮ್ಮೆ ಮಾತ್ರ ಚೆನ್ನೈ ತಂಡ ಅಮಾನಾತಾಗಿದ್ದಾಗ ಪುಣೆ ವಾರಿಯರ್ಸ್ ಪರ ಆಡಿದ್ದರು. ಸಿಎಸ್ ಕೆ ನಾಯಕರಾಗಿ ನಾಲ್ಕು ಬಾರಿ ಚಾಂಪಿಯನ್ ಶಿಪ್ ಗೇರಿದ ಗರಿಮೆ ಧೋನಿಯದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ