ಎದುರಾಳಿಗಳ ಬಗ್ಗೆ ಆರ್ ಸಿಬಿಗೆ ಗುಟ್ಟುಬಿಟ್ಟುಕೊಟ್ಟಿದ್ದಾರಂತೆ ದಿನೇಶ್ ಕಾರ್ತಿಕ್

ಬುಧವಾರ, 30 ಮಾರ್ಚ್ 2022 (16:48 IST)
ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಇಂದಿನ ಪಂದ್ಯಕ್ಕೆ ಮೊದಲು ತಮ್ಮ ಹಳೆಯ ತಂಡದ ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಇಂದು ಆರ್ ಸಿಬಿ-ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ದಿನೇಶ್ ಕಳೆದ ಋತುವಿನವರೆಗೂ ಕೆಕೆಆರ್ ತಂಡದಲ್ಲಿದ್ದರು. ಹೀಗಾಗಿ ಈ ತಂಡದ ಪ್ರಮುಖ ಆಟಗಾರರಾದ ಕೀ ಆಟಗಾರರಾದ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ.

ಹೀಗಾಗಿ ಈ ಆಟಗಾರರ ಹುಳುಕುಗಳೇನು, ಸಾಮರ್ಥ್ಯವೇನು ಎಂಬುದರ ಬಗ್ಗೆ ಆರ್ ಸಿಬಿಗೆ ಮಾಹಿತಿ ನೀಡಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ