ಗಂಗೂಲಿ ಮಾತಿಗೂ ಸೊಪ್ಪು ಹಾಕದ ಹಾರ್ದಿಕ್ ಪಾಂಡ್ಯ! ರಣಜಿಗೆ ಗೈರು

ಮಂಗಳವಾರ, 8 ಫೆಬ್ರವರಿ 2022 (10:07 IST)
ಮುಂಬೈ: ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ತವರು ಬರೋಡ ಪರ ರಣಜಿ ಆಡುತ್ತಿಲ್ಲ.

ಕೆಲವು ದಿನಗಳ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಪಾಂಡ್ಯ ಮತ್ತೆ ತಂಡಕ್ಕೆ ಮರಳಬೇಕಾದರೆ ರಣಜಿಯಲ್ಲಿ ಆಡಿ ಫಾರ್ಮ್ ಮತ್ತು ಫಿಟ್ನೆಸ್ ಸಾಬೀತುಪಡಿಸಬೇಕು ಎಂದಿದ್ದರು.

ಆದರೆ ಈಗ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಗೆ ಬರೋಡ ತಂಡ ಘೋಷಣೆಯಾಗಿದ್ದು, ಈ ತಂಡದಲ್ಲಿ ಹಾರ್ದಿಕ್ ಹೆಸರೇ ಇಲ್ಲ. ಅವರು ರಣಜಿಯಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ ನಲ್ಲಿ ಲಕ್ನೋ ತಂಡದ ನಾಯಕರಾಗಿರುವ ಹಾರ್ದಿಕ್ ಈಗ ಕೇವಲ ಐಪಿಎಲ್ ನತ್ತ ಗಮನಹರಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ