ಪಂದ್ಯದ ಟಾಸ್ಗಾಗಿ ಬೆಳ್ಳಿ ನಾಣ್ಯವನ್ನು ಬಳಸಲಾಗುವುದು. ಭಾರತ ಕ್ರಿಕೆಟ್ ತಂಡ ದಿಗ್ಗಜರೆನಿಸಿಕೊಂಡ ಮಾಜಿ ನಾಯಕರು ಈ ವಿಶೇಷ ಕ್ಷಣಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೆ. ಶ್ರೀಕಾಂತ್, ಕಪಿಲ್ ದೇವ್, ಸುನೀಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ದಂತಕಥೆಗಳಿಗೆ ಅಂದು ಗೌರವ ನೀಡಲಾಗುವುದು.
ಅಷ್ಟೇ ಅಲ್ಲದೇ 2000 ಮಂದಿ ಬುದ್ಧಿ ಮಾಂದ್ಯ ಶಾಲಾ ಮಕ್ಕಳು, ದಿವ್ಯಾಂಗ, ಅನಾಥಾಲಯದ ಮಕ್ಕಳನ್ನೆಲ್ಲ ಪಂದ್ಯ ವೀಕ್ಷಣೆಗೆ ಕರೆಯಲಾಗುವುದು. ಇವರೆಲ್ಲರಿಗೂ ವಿಶೇಷವಾದಿ ತಯಾರಿಸಲಾದ 'ಭಾರತದ 500ನೇ ಟೆಸ್ಟ್' ಎಂಬ ಬರಹವುಳ್ಳ ಟೀ- ಶರ್ಟ್ ನೀಡುವ ಮೂಲಕ ಬಿಸಿಸಿಐ ಈ ಐತಿಹಾಸಿಕ ಕ್ಷಣವನ್ನು ವಿಶಿಷ್ಠವಾಗಿ ಆಚರಿಸಲಿದೆ.