ಕೆಎಲ್ ರಾಹುಲ್, ಜಯದೇವ್ ಉನಾದ್ಕಟ್ ಗೆ ಗಾಯ: ಟೀಂ ಇಂಡಿಯಾಗೆ ಆತಂಕ

ಬುಧವಾರ, 3 ಮೇ 2023 (08:20 IST)
Photo Courtesy: Twitter
ಮುಂಬೈ: ಐಪಿಎಲ್ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಜಯದೇವ್ ಉನಾದ್ಕಟ್ ಗಾಯಕ್ಕೆ ತುತ್ತಾಗಿರುವುದು ಟೀಂ ಇಂಡಿಯಾ ಆತಂಕ ಹೆಚ್ಚಿಸಿದೆ.

ಇಬ್ಬರೂ ಆಟಗಾರರೂ ಜೂನ್ 7 ರಂದು ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಂಡದ ಭಾಗವಾಗಿದ್ದಾರೆ. ರಾಹುಲ್ ಸ್ನಾಯುಸೆಳೆತಕ್ಕೊಳಗಾಗಿದ್ದರೆ, ಜಯದೇವ್ ಭುಜದ ನೋವಿಗೊಳಗಾಗಿದ್ದಾರೆ.

ಈ ಪೈಕಿ ರಾಹುಲ್ ಫಿಟ್ ಆಗುವ ನಿರೀಕ್ಷೆಯಿದ್ದರೂ ಜಯದೇವ್ ಉನಾದ್ಕಟ್ ಡಬ್ಲ್ಯುಟಿಸಿ ಫೈನಲ್ ಅವಕಾಶ ಮಿಸ್ ಮಾಡಿಕೊಳ್ಳುವ ಸಾಧ‍್ಯತೆ ಕಂಡುಬರುತ್ತಿದೆ. ಈಗಾಗಲೇ ಉಮೇಶ್ ಯಾದವ್ ಕೂಡಾ ಗಾಯಗೊಂಡಿರುವುದರಿಂದ ಟೀಂ ಇಂಡಿಯಾ ಆತಂಕ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ