ಮೈದಾನದಲ್ಲೇ ಸಹೋದರ ಹಾರ್ದಿಕ್ ತಬ್ಬಿ ಗೋಳೋ ಎಂದು ಅತ್ತ ಕೃನಾಲ್ ಪಾಂಡ್ಯ

ಬುಧವಾರ, 24 ಮಾರ್ಚ್ 2021 (10:06 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೃನಾಲ್ ಪಾಂಡ್ಯ ಅರ್ಧಶತಕ ಗಳಿಸಿದ ಬಳಿಕ ಭಾವುಕರಾದ ಘಟನೆ ನಡೆದಿದೆ.


ಕೃನಾಲ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 300 ಪ್ಲಸ್ ಸ್ಕೋರ್ ಮಾಡಲು ಸಹಾಯವಾಯಿತು. 26 ಎಸೆತಗಳಿಂದ 50 ರನ್ ಗಳಿಸಿದ ಕೃನಾಲ್  ಚೊಚ್ಚಲ ಪಂದ್ಯದಲ್ಲಿ ಕಡಿಮೆ ಎಸೆತದಲ್ಲಿ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. ಅರ್ಧಶತಕ ಗಳಿಸಿದ ಬಳಿಕ ಆಕಾಶದೆತ್ತರಕ್ಕೆ ಬ್ಯಾಟ್ ಎತ್ತಿದ್ದಲ್ಲದೆ, ತಮ್ಮೆ ಎದೆ ಮುಟ್ಟಿಕೊಂಡು ಡಗ್ ಔಟ್ ನಲ್ಲಿದ್ದ ಸಹೋದರ ಹಾರ್ದಿಕ್ ಪಾಂಡ್ಯ ಕಡೆಗೆ ಭಾವುಕರಾಗಿ ಸನ್ನೆ ಮಾಡಿದರು.

ಇತ್ತೀಚೆಗಷ್ಟೇ ಪಾಂಡ್ಯ ಸಹೋದರರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಮ್ಮ ಕ್ರಿಕೆಟ್ ಜೀವನಕ್ಕೆ ಪ್ರೋತ್ಸಾಹ ಕೊಡುತ್ತಿದ್ದ ತಂದೆಯನ್ನು ಈ ಸಂದರ್ಭದಲ್ಲಿ ನೆನೆದ ಕೃನಾಲ್ ಭಾವುಕರಾದರು. ತಮ್ಮ ಇನಿಂಗ್ಸ್ ಮುಗಿದ ಮೇಲೆ ಮೈದಾನದಲ್ಲಿಯೇ ಸಹೋದರ ಹಾರ್ದಿಕ್ ರನ್ನು ತಬ್ಬಿಕೊಂಡ ಕೃನಾಲ್ ಕಣ್ಣೀರು ಮಿಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ