ಚಿನ್ನಸ್ವಾಮಿ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರಿಗೆ ಟಿಕೆಟ್ ಹಣ ವಾಪಸ್ ಮಾಡಲಿರುವ ಕೆಎಸ್ ಸಿಎ

ಸೋಮವಾರ, 20 ಜೂನ್ 2022 (08:30 IST)
ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಬೇಕಿದ್ದ ಭಾರತ-ದ.ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಎಷ್ಟೋ ಸಮಯದ ಬಳಿಕ ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಅಭಿಮಾನಿಗಳೂ ಫುಲ್ ಜೋಶ್ ನಲ್ಲಿ ಮೈದಾನಕ್ಕೆ ಬಂದಿದ್ದರು. ಆದರೆ ಮಳೆ ಎಲ್ಲರ ಕನಸಿಗೆ ತಣ್ಣೀರೆರಚಿತ್ತು.

ಇದೀಗ ಪಂದ್ಯ ನೋಡಲು ಟಿಕೆಟ್ ಗಾಗಿ ಹಣ ತೆತ್ತಿದ್ದ ಎಲ್ಲರಿಗೂ ಶೇ.50 ರಷ್ಟು ಹಣ ಸಂದಾಯ ಮಾಡುವುದಾಗಿ ಕೆಎಸ್ ಸಿಎ ಘೋಷಿಸಿದೆ. ನಿಯಮಗಳ ಪ್ರಕಾರ ಒಂದೇ ಒಂದು ಬಾಲ್ ಎಸೆದರೂ ಟಿಕೆಟ್ ಹಣ ರಿಫಂಡ್ ಮಾಡಬೇಕಾಗಿಲ್ಲ. ಆದರೆ ಕೆಎಸ್ ಸಿಎ ಅಭಿಮಾನಿಗಳಿಗಾಗಿ ಟಿಕೆಟ್ ಹಣ ಮರಳಿಸುವ ನಿರ್ಧಾರ ಕೈಗೊಂಡಿದೆ ಎಂದು ಕೆಎಸ್ ಸಿಎ ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ