ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಭಾರತೀಯನೇ ನಾಯಕ

ಮಂಗಳವಾರ, 28 ಮಾರ್ಚ್ 2023 (08:40 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ನಿತೀಶ್ ರಾಣಾ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕೆಕೆಆರ್ ತಂಡದ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಬೆನ್ನು ನೋವಿಗೊಳಗಾಗಿದ್ದು, ಈ ಇಡೀ ಐಪಿಎಲ್ ನಲ್ಲಿ ಭಾಗಿಯಾಗುವುದು ಅನುಮಾನ. ಹೀಗಾಗಿ ಅವರ ಸ್ಥಾನಕ್ಕೆ ವಿದೇಶೀ ಅನುಭವಿ ಆಟಗಾರರನ್ನು ನಾಯಕನಾಗಿ ಮಾಡಬಹುದು ಎನ್ನಲಾಗಿತ್ತು.

ಆದರೆ ಎಲ್ಲಾ ಊಹಾಪೋಹಗಳನ್ನು ಸರಿಸಿರುವ ಕೆಕೆಆರ್ ಭಾರತೀಯನೇ ಆಗಿರುವ ನಿತೀಶ್ ರಾಣಾ ತಂಡವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ