ಮನೆಗೆ ಹೋಗೋನು ನಾನು ಒಬ್ನೇ ಅಲ್ಲ! ಭಾರತ ವಿರುದ್ಧ ಸೋತ ಬಳಿಕ ಪಾಕ್ ನಾಯಕನಿಂದ ಎಚ್ಚರಿಕೆ!

ಮಂಗಳವಾರ, 18 ಜೂನ್ 2019 (09:57 IST)
ಲಂಡನ್: ಭಾರತದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಸೋತಿದ್ದಕ್ಕೆ ಪಾಕಿಸ್ತಾನ ತಂಡದ ಕ್ರಿಕೆಟಿಗರ ವಿರುದ್ಧ ತವರಿನಲ್ಲಿ ಆಕ್ರೋಶ ಮೇರೆ ಮೀರಿದೆ. ಈ ಹಿನ್ನಲೆಯಲ್ಲಿ ಇದೀಗ ಆಟಗಾರರಿಗೆ ತವರಿಗೆ ಮರಳುವ ಚಿಂತೆ ಶುರುವಾಗಿದೆ.


ಭಾರತದ ವಿರುದ್ಧ ಸೋತ ಬಳಿಕ ನಾಯಕ ಸರ್ಫರಾಜ್ ಅಹಮ್ಮದ್ ಸಹ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಮನೆಗೆ ಹೋಗೋದು ನಾನು ಒಬ್ಬನೇ ಅಲ್ಲ. ನೀವೂ ಅಭಿಮಾನಿಗಳ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಸರ್ಫರಾಜ್ ತಂಡದ ಸಹ ಆಟಗಾರರ ಮೇಲೆ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವುದನ್ನು ನೋಡಿ. ಇಲ್ಲವಾದರೆ ಎಲ್ಲಾ ಟೀಕೆಗಳು ನನಗೇ ಎಂದುಕೊಂಡು ನೀವು ಸುಮ್ಮನಿದ್ದರೆ ಅದು ತಪ್ಪಾದೀತು. ಎಲ್ಲರೂ ಅಭಿಮಾನಿಗಳ ಆಕ್ರೋಶ ಎದುರಿಸಬೇಕಾದೀತು ಎಂದು ಸರ್ಫರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ