ಐಪಿಎಲ್ ಗಿಂತ ಭಾರತದ ಎಳೆಯರ ತಂಡವೇ ಮುಖ್ಯ ಎಂದಿದ್ದರಂತೆ ರಾಹುಲ್ ದ್ರಾವಿಡ್!

ಭಾನುವಾರ, 24 ಜೂನ್ 2018 (08:33 IST)
ಮುಂಬೈ: ಕ್ರಿಕೆಟ್ ನ ಜಂಟಲ್ ಮೆನ್ ಗಳ ಪೈಕಿ ರಾಹುಲ್ ದ್ರಾವಿಡ್ ಅಗ್ರ ಸ್ಥಾನದಲ್ಲಿರುತ್ತಾರೆ. ಅವರು ಕ್ರಿಕೆಟ್ ನ ಏಳಿಗೆ ಬಗ್ಗೆ ಚಿಂತಿಸುತ್ತಾರೆಯೇ  ಹೊರತು ಲಾಭ ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ ಎನ್ನುವುದು ಮತ್ತೆ ಬಯಲಾಗಿದೆ.

ಹಿಂದೆ ಐಪಿಎಲ್ ಅಥವಾ ರಾಷ್ಟ್ರೀಯ ತಂಡದ ನಡುವೆ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಾಗ ಸ್ವತಃ ದ್ರಾವಿಡ್ ನನಗೆ ಭಾರತ ಎ ತಂಡದ ಕೋಚಿಂಗ್ ಕೆಲಸವೇ ಸಾಕು. ಐಪಿಎಲ್ ಬೇಡ ಎಂದಿದ್ದರಂತೆ.

ಲೋಧಾ ಸಮಿತಿ ಶಿಫಾರಸ್ಸಿನಂತೆ ಕೋಚ್ ಗಳಾಗಿರುವವರು ಐಪಿಎಲ್ ನಲ್ಲೂ ಪಾಲ್ಗೊಳ್ಳುವಂತಿಲ್ಲ. ಹಾಗಾಗಿ ದ್ರಾವಿಡ್ ಗೆ ಹಣ ಕೊಡುವ ಐಪಿಎಲ್ ಅಥವಾ ಭಾರತ ತಂಡದ ನಡುವೆ ಆಯ್ಕೆ ಮಾಡಬೇಕಾಗಿ ಬಂತು. ಆದರೆ ದ್ರಾವಿಡ್ ನನಗೆ ಐಪಿಎಲ್ ಗಿಂತ ಭಾರತ ಎಂ ತಂಡವೇ ಮುಖ್ಯ ಎಂದರಂತೆ. ಹೀಗಂತ ಬಿಸಿಸಿಐನ ಆಡಳಿತಾಧಿಕಾರಿ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ