ದೆಹಲಿಯಲ್ಲಿ ರಣಜಿ ಆಡಲಿರುವ ಕ್ರಿಕೆಟಿಗರಿಗೆ ಎದುರಾಗಿದೆ ಸಂಕಷ್ಟ!

ಶುಕ್ರವಾರ, 2 ನವೆಂಬರ್ 2018 (09:00 IST)
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದಿಂದಾಗಿ ಸಾಮಾನ್ಯ ಜನರ ಜತೆಗೆ ಕ್ರೀಡಾ ಕೂಟಗಳಿಗೂ ತೊಂದರೆ ಎದುರಾಗಿದೆ.

ಕಳೆದ ವರ್ಷ ಶ್ರೀಲಂಕಾ ಕ್ರಿಕೆಟ್ ತಂಡ ಟೀಂ ಇಂಡಿಯಾ ಎದುರು ದೆಹಲಿಯಲ್ಲಿ ಆಡುವಾಗ ವಾಯು ಮಾಲಿನ್ಯದ ಕಾರಣ ಒಡ್ಡಿ ಆಗಾಗ ಆಟಕ್ಕೆ ಅಡ್ಡಿಪಡಿಸಿದ್ದು, ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಈ ವರ್ಷವೂ ಅದೇ ಸಮಸ್ಯೆ ಹಲವು ಕ್ರೀಡಾ ಕೂಟಗಳಿಗೆ ಎದುರಾಗಿದೆ.

ಐಎಸ್ಎಲ್ ಫುಟ್ಬಾಲ್ ಪಂದ್ಯದಿಂದ ತೊಡಗಿ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳಿಗೂ ಈ ಬಾರಿ ದೆಹಲಿಯಲ್ಲಿ ಆಡುವ ಕ್ರೀಡಾಳುಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಇಂತಹ ವಾತಾವರಣದಲ್ಲಿ ಆಡುವಾಗ ಹಲವು ಆರೋಗ್ಯ ಸಮಸ್ಯೆಗಳಿಗೆ ಕ್ರೀಡಾಳುಗಳು ಗುರಿಯಾಗಬೇಕಾಗುತ್ತದೆ. ಹೀಗಾಗಿ ದೆಹಲಿಯಲ್ಲಿ ನಡೆಯಬೇಕಾದ ಹಲವು ಪಂದ್ಯಗಳು ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ