ಸಿಎಸ್ ಕೆ ಮೇಲೆ ಮುನಿಸಿಕೊಂಡಿದ್ದ ಜಡೇಜಾರನ್ನು ಸರಿದಾರಿಗೆ ತಂದಿದ್ದು ಧೋನಿ!

ಮಂಗಳವಾರ, 28 ಮಾರ್ಚ್ 2023 (09:20 IST)
Photo Courtesy: Twitter
ಚೆನ್ನೈ: ಕಳೆದ ಐಪಿಎಲ್ ನಲ್ಲಿ ಸಿಎಸ್ ಕೆ ನಾಯಕರಾಗಿದ್ದ ರವೀಂದ್ರ ಜಡೇಜಾ ಕೊನೆಗೆ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವ ಕಳೆದುಕೊಂಡಿದ್ದರು. ಇದರಿಂದಾಗಿ ಜಡೇಜಾಗೆ ಸಿಎಸ್ ಕೆ ಮ್ಯಾನೇಜ್ ಮೆಂಟ್ ಮೇಲೆ ಮುನಿಸಾಗಿತ್ತು.

ಇದೇ ಕಾರಣಕ್ಕೆ ಜಡೇಜಾ ಚೆನ್ನೈ ತಂಡ ಬಿಡಲೂ ಯೋಚನೆ ಮಾಡಿದ್ದರು. ಆದರೆ ಅವರನ್ನು ಮತ್ತೆ ತಂಡಕ್ಕೆ ಮರಳಿ ಕರೆಸಿಕೊಂಡಿದ್ದ ಧೋನಿ.

ಧೋನಿ ಮತ್ತು ಸಿಎಸ್ ಕೆ ಸಿಇಒ ವಿಶ್ವನಾಥನ್ ಜಡೇಜಾ ಜೊತೆಗೆ ಫೋನ್ ಕರೆ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದರು. ಅದರಲ್ಲಿ ಜಡೇಜಾ ತಮ್ಮಿಂದ ನಾಯತ್ವ ಕಿತ್ತುಕೊಂಡಿದ್ದು ಅಸಮಾಧಾನ ತಂದಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ತಮ್ಮ ಕಳಪೆ ಫಾರ್ಮ್ ನಿಂದ ಮನಸ್ಸಿಗೆ ಬೇಸರವಾಗಿದೆ ಎಂದಿದ್ದರು. ಇದೆಲ್ಲದಕ್ಕೂ ಧೋನಿ ಸಮಾಧಾನ ಹೇಳಿದ ಮೇಲೆ ಜಡೇಜಾ ಮುನಿಸು ಕರಗಿತ್ತಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ