ಐಪಿಎಲ್ 2024: ಆರ್ ಸಿಬಿ ಗೆಲ್ಲಲೆಂದು ಅಭಿಮಾನಿಗಳ ಟೆಂಪಲ್ ರನ್

Krishnaveni K

ಬುಧವಾರ, 22 ಮೇ 2024 (11:58 IST)
ಬೆಂಗಳೂರು: ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಆರ್ ಸಿಬಿ ವರ್ಸಸ್ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಇಂದು ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಗೆದ್ದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಇಂದು ಸೋತರೆ ಅಲ್ಲಿಗೆ ಈ ಬಾರಿಯೂ ಕಪ್ ಗೆಲ್ಲುವ ಕನಸು ಭಗ್ನವಾಗಲಿದೆ.

ಆದರೆ ಈ ಬಾರಿ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ಫೀನಿಕ್ಸ್ ನಂತೆ ಎದ್ದು ಸತತವಾಗಿ 6 ಗೆಲುವು ಕಂಡು ಪ್ಲೇ ಆಫ್ ಗೆ ಅರ್ಹತೆ ಪಡೆದಿದ್ದೇ ಒಂದು ಸಾಹಸ. ಆರ್ ಸಿಬಿಯ ಆಟ ಕಂಡು ಅಭಿಮಾನಿಗಳಲ್ಲೂ ಕಪ್ ಗೆಲ್ಲುವ ಭರವಸೆ ಮೂಡಿದೆ.

ಹೀಗಾಗಿ ಅಭಿಮಾನಿಗಳು ದೇವಾಲಯಗಳಿಗೆ ತೆರಳಿ ಇಂದು ಆರ್ ಸಿಬಿ ಗೆಲ್ಲುವಂತೆ ಪ್ರಾರ್ಥನೆ ನಡೆಸುತ್ತಿದ್ದಾರೆ. ಕಳೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಆರ್ ಸಿಬಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಿತ್ತು. ಈ ಪಂದ್ಯಕ್ಕೆ ಮುನ್ನವೂ ಅಭಿಮಾನಿಗಳು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇಂದು ಮತ್ತೊಮ್ಮೆ ಆರ್ ಸಿಬಿ ಗೆಲ್ಲಿಸಿಕೊಡುವಂತೆ ದೇವರ ಮೊರೆ ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ