ಬೆಂಗಳೂರು: ಐಪಿಎಲ್ ಗೆದ್ದು ತವರಿಗೆ ಬಂದಿಳಿದಿರುವ ಆರ್ ಸಿಬಿ ಆಟಗಾರರಿಗೆ ಬೆಂಗಳೂರು ಎಚ್ಎಎಲ್ ಏರ್ ಪೋರ್ಟ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭವ್ಯ ಸ್ವಾಗತ ಕೋರಿದ್ದಾರೆ. ಈ ವೇಳೆ ಕೊಹ್ಲಿ ಕೈಗೆ ಕನ್ನಡ ಬಾವುಟ ನೀಡಿದ್ದು ಇದನ್ನು ನೋಡುವುದೇ ಚಂದ ಎನ್ನುತ್ತಿದ್ದಾರೆ ಫ್ಯಾನ್ಸ್.
ಐಪಿಎಲ್ 2025 ರ ಫೈನಲ್ ಗೆದ್ದು ತವರಿಗೆ ಬಂದಿಳಿದಿರುವ ಕ್ರಿಕೆಟಿಗರಿಗೆ ಇಂದು ವಿಧಾನಸೌಧದ ಮುಂಭಾಗ ಸನ್ಮಾನ ಕಾರ್ಯಕ್ರಮ ಮತ್ತು ಬಳಿಕ ಚಿನ್ನಸ್ವಾಮಿಯಲ್ಲಿ ಅಭಿನಂದನಾ ಕಾರ್ಯಕ್ರಮವಿದೆ. ಇದಕ್ಕಾಗಿ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಯಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ನಿನ್ನೆಯೇ ವಿರಾಟ್ ಕೊಹ್ಲಿ ಬೆಂಗಳೂರಿನ ಅಭಿಮಾನಿಗಳನ್ನು ನೋಡಲು ಕಾತುರರಾಗಿರುವುದಾಗಿ ಹೇಳಿದ್ದರು. ಅವರಿಗೆ ಅಭಿಮಾನಿಗಳು ನಿರಾಸೆ ಮಾಡಿಲ್ಲ. ಸಾಗರೋಪಾದಿಯಲ್ಲಿ ಜನ ವಿಧಾನಸೌಧ ಮತ್ತು ಚಿನ್ನಸ್ವಾಮಿ ಮೈದಾನಕ್ಕೆ ಲಗ್ಗೆಯಿಡುತ್ತಿದ್ದಾರೆ.
ಇನ್ನು, ವಿರಾಟ್ ಕೊಹ್ಲಿ ಕೈಗೆ ಡಿಸಿಎಂ ಡಿಕೆ ಶಿವಕುಮಾರ್ ಆರ್ ಸಿಬಿ ಬಾವುಟದ ಜೊತೆಗೆ ಕನ್ನಡ ಬಾವುಟವನ್ನೂ ನೀಡಿದ್ದಾರೆ. ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡಿ ಕನ್ನಡಿಗ ಫ್ಯಾನ್ಸ್ ಭಾವುಕರಾಗಿದ್ದು, ಅವರ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಖಷಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Dreaming of this moment for 18 years and its finally here, bigger, better than we ever imagined♥️