ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಕಪ್ ಗೆಲ್ಲುತ್ತಿದ್ದಂತೇ ಆರ್ ಸಿಬಿ ಫ್ಯಾನ್ಸ್ ಈಗ ಅಣ್ಣ ಎಲ್ಲವ್ನೋ ಎಂದು ಅಂಬಟಿ ರಾಯುಡುಗಾಗಿ ಹುಡುಕಾಡುತ್ತಿದ್ದಾರೆ.
ಸದಾ ಆರ್ ಸಿಬಿಯನ್ನು ಟೀಕಿಸುತ್ತಾ ಬಂದಿದ್ದ ಸಿಎಸ್ ಕೆ ಮಾಜಿ ಆಟಗಾರ, ಕಾಮೆಂಟೇಟರ್ ಅಂಬಟಿ ರಾಯುಡು ಈ ಸೀಸನ್ ನ ಆರಂಭಕ್ಕೂ ಮುನ್ನವೂ ಕುಹುಕವಾಡಿದ್ದರು. ಆರ್ ಸಿಬಿಯಂತಹ ತಂಡ ಟೂರ್ನಿಯಲ್ಲಿ ಮನರಂಜನೆಗಾಗಿ ಇರಬೇಕು. ಆದ್ರೆ ಕಪ್ ಯಾವತ್ತೂ ಗೆಲ್ಲಕ್ಕಾಗಲ್ಲ ಎಂದು ವ್ಯಂಗ್ಯ ಮಾಡಿದ್ದರು.
ಅವರ ಕಾಮೆಂಟ್ ಆರ್ ಸಿಬಿ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸುತ್ತಿತ್ತು. ಈ ಸಲ ಆರ್ ಸಿಬಿ ಕೊನೆಗೂ ಕಪ್ ಗೆದ್ದಿದೆ. ಹೀಗಾಗಿ ಈಗ ಫ್ಯಾನ್ಸ್ ಅಂಬಟಿ ರಾಯುಡುಗಾಗಿ ಹುಡುಕಾಡುತ್ತಿದ್ದಾರೆ. ಕಪ್ ಗೆಲ್ಲಲ್ಲ ಎನ್ನುತ್ತಿದ್ರು ಈಗ ಎಲ್ಲಿ ಹೋದ್ರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಇತ್ತ ಅಂಬಟಿ ರಾಯುಡು ಆರ್ ಸಿಬಿಗೆ ವಿಶ್ ಮಾಡಿ ಟ್ವೀಟ್ ಮಾಡುತ್ತಿದ್ದಂತೇ ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ. ಇದು ನಿಜವಾಗಿಯೂ ನಿಮ್ಮ ಖಾತೆಯಾ ಅಥವಾ ಹ್ಯಾಕ್ ಆಗಿದೆಯಾ? ಒಳಗೊಳಗೇ ಎಷ್ಟು ಅಳ್ತಿದ್ದಾರೋ ಎಂದು ಫ್ಯಾನ್ಸ್ ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.