ಅಹಮ್ಮದಾಬಾದ್: ಆರ್ ಸಿಬಿ ಕಪ್ ಗೆಲ್ಲಲು ಲಾಯಕ್ಕಲ್ಲ ಎಂದವರಿಗೆ, ವಿಶ್ವದ ಯಾವುದೇ ಮೂಲೆಗೆ ಹೋದರೂ ಈ ಸಲ ಕಪ್ ನಮ್ದೇ ಎಂದು ಪ್ರೋತ್ಸಾಹಿಸುತ್ತಿದ್ದ ಅಭಿಮಾನಿಗಳಿಗೆ, ನಾನಿದ್ದಾಗ ಒಮ್ಮೆಯಾದರೂ ಕಪ್ ಗೆಲ್ಲಬೇಕು ಎಂದು ಹಂಬಲಿಸುತ್ತಿದ್ದ ವಿರಾಟ್ ಕೊಹ್ಲಿಗೆ ಈ ಕಪ್ ಅರ್ಪಣೆ. ಹೌದು.. ಈ ಸಲ ಕಪ್ ನಮ್ದೇ..
ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರನ್ ಗಳಿಂದ ಸೋಲಿಸಿದ ಆರ್ ಸಿಬಿ ಈ ಬಾರಿ ಕಪ್ ನಮ್ದೇ ಎಂದು ಗೆದ್ದು ಬೀಗಿದೆ. ಇದರೊಂದಿಗೆ 18 ವರ್ಷಗಳ ಕನಸು ನನಸಾಗಿದೆ.
ಇಂದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 190 ರನ್ ಗಳಿಸಿದಾಗ ಈ ಮೊತ್ತ ಡಿಫೆಂಡ್ ಮಾಡಲು ಸಾಕಾಗುತ್ತಾ ಎಂದು ಎಲ್ಲರಿಗೂ ಒಂದು ಅನುಮಾನ ಕಾಡಿತ್ತು. ಆದರೆ ಜೋಶ್ ಹೇಝಲ್ ವುಡ್ ಮೇಲೆ ಎಲ್ಲರ ಭರವಸೆಯಿತ್ತು. ಆದರೆ ಇಂದು ಔಟ್ ಆಫ್ ಸಿಲಬಸ್ ಆಗಿ ಬಂದವರು ಕೃನಾಲ್ ಪಾಂಡ್ಯ. 2 ವಿಕೆಟ್ ಕಬಳಿಸುವುದರ ಜೊತೆಗೆ ರನ್ ಕೂಡಾ ನಿಯಂತ್ರಿಸುವ ಮೂಲಕ ಪಂದ್ಯ ಆರ್ ಸಿಬಿ ಕಡೆಗೆ ವಾಲುವಂತೆ ಮಾಡಿದರು.
ನಾಯಕ ಶ್ರೇಯಸ್ ಅಯ್ಯರ್ 1 ರನ್ ಗೆ ವಿಕೆಟ್ ಒಪ್ಪಿಸಿದಾಗ ಪಂದ್ಯಕ್ಕೆ ತಿರುವು ಸಿಕ್ಕಿತು. ಇದಾದ ಬಳಿಕ ಶಶಾಂಕ್ ಸಿಂಗ್ ಕೊಂಚ ಪ್ರತಿರೋಧ ತೋರಿದರೂ ಅವರ ಇನಿಂಗ್ಸ್ 60 ಕ್ಕೇ ಸೀಮಿತವಾಯಿತು. ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸುತ್ತಿದ್ದಂತೇ ಆರ್ ಸಿಬಿ ಗೆಲುವು ಕನ್ ಫರ್ಮ್ ಆಯಿತು. ಮೈದಾನದಲ್ಲಿದ್ದ ಆಟಗಾರರು, ಪ್ರೇಕ್ಷಕರ ಜೊತೆಗೆ ಇಡೀ ಕರ್ನಾಟಕವೇ ಈ ಗೆಲುವನ್ನು ಸಂಭ್ರಮಿಸುತ್ತಿದೆ.