Virat Kohli: ಆರ್ ಸಿಬಿ ಫೈನಲ್ ಗೆ ಮೊದಲು ವಿರಾಟ್ ಕೊಹ್ಲಿಗೆ ಕೇಸ್ ಶಾಕ್

Krishnaveni K

ಸೋಮವಾರ, 2 ಜೂನ್ 2025 (10:51 IST)
ಬೆಂಗಳೂರು: ಆರ್ ಸಿಬಿಗೆ ಚೊಚ್ಚಲ ಕಪ್ ಗೆದ್ದುಕೊಡುವ ಭರವಸೆಯೊಂದಿಗೆ ನಾಳೆ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿಗೆ ಈಗ ಕೇಸ್ ಶಾಕ್ ಎದುರಾಗಿದೆ.

ವಿರಾಟ್ ಕೊಹ್ಲಿ ಕ್ರಿಕೆಟ್ ಹೊರತಾಗಿ ತಮ್ಮದೇ ರೆಸ್ಟೋರೆಂಟ್ ಉದ್ಯಮ ಹೊಂದಿದ್ದಾರೆ. ಅವರ ಒನ್ 8 ಕಮ್ಯೂಟ್ ರೆಸ್ಟೋರೆಂಟ್ ಶಾಖೆ ಬೆಂಗಳೂರಿನಲ್ಲೂ ಇದೆ. ಇದೀಗ ಆ ರೆಸ್ಟೋರೆಂಟ್ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರಿನ ಕಸ್ತೂರ್ ಬಾ ರೋಡ್ ನಲ್ಲಿರುವ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಆಂಡ್ ಬಾರ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿದ್ದಾರೆ. ಈ ಮೊದಲು 2024 ರಲ್ಲೂ ಕೊಹ್ಲಿ ಒಡೆತನದ ರೆಸ್ಟೋರೆಂಟ್ ಅವಧಿ ಮೀರಿ ಓಪನ್ ಆಗಿದ್ದಕ್ಕೆ ಪೊಲೀಸರು ಕೇಸ್ ದಾಖಲಿಸಿದ್ದರು. ಇದೀಗ ಮತ್ತೆ ಕೊಹ್ಲಿ ಒಡೆತನದ ರೆಸ್ಟೋರೆಂಟ್ ಗೆ ತೊಂದರೆ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ