ಅಂದು ರೋಹಿತ್ ಗೆ ಕ್ಯಾಪ್ ಕೊಟ್ಟಿದ್ದ ಸಚಿನ್: ಇಂದು ಸಚಿನ್ ಪುತ್ರನಿಗೆ ರೋಹಿತ್ ಕ್ಯಾಪ್

ಸೋಮವಾರ, 17 ಏಪ್ರಿಲ್ 2023 (08:50 IST)
Photo Courtesy: Twitter
ಮುಂಬೈ: ಐಪಿಎಲ್ 2023 ರ ನಿನ್ನೆಯ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಪದಾರ್ಪಣೆ ಮಾಡಿದ್ದಾರೆ.

ಅರ್ಜುನ್ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವಾಡಿದ್ದರು. 2 ಓವರ್ ಎಸೆದಿದ್ದ ಅರ್ಜುನ್ ವಿಕೆಟ್ ಕೀಳಲು ವಿಫಲವಾಗಿದ್ದು, 17 ರನ್ ನೀಡಿದ್ದರು. ಬಳಿಕ ಬ್ಯಾಟಿಂಗ್ ಗೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಸಚಿನ್ ಪುತ್ರನ ಪದಾರ್ಪಣೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ವಿಶೇಷವೆಂದರೆ ಅಂದು ರೋಹಿತ್ ಶರ್ಮಾ ಚೊಚ್ಚಲ ಪಂದ್ಯವಾಡುವಾಗ ಸ್ವತಃ ಸಚಿನ್ ತೆಂಡುಲ್ಕರ್ ಕ್ಯಾಪ್ ನೀಡಿ ಗೌರವಿಸಿದ್ದರು. ಇಂದು ಅರ್ಜುನ್ ತೆಂಡುಲ್ಕರ್ ಗೆ ರೋಹಿತ್ ಶರ್ಮಾ ಕ್ಯಾಪ್ ಕೊಟ್ಟು ಗೌರವಿಸಿದ್ದಾರೆ. ಬಳಿಕ ರೋಹಿತ್ ಅರ್ಜುನ್ ಗೆ ಪ್ರೀತಿಯ ಅಪ್ಪುಗೆ ನೀಡಿದ್ದು, ಈ ವೇಳೆ ಅರ್ಜುನ್ ಭಾವುಕರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ