ಭಾರತ ಕ್ರೀಡಾ ಪ್ರಾಧಿಕಾರದ ವಿಚಿತ್ರ ಕ್ರಮವೊಂದರಲ್ಲಿ ರಿಯೊಗೆ ತೆರಳುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಕೇವಲ ಒಬ್ಬರು ದೈಹಿಕ ಚಿಕಿತ್ಸಕರು ತೆರಳಲು ಅವಕಾಶ ನೀಡಲಾಗಿದೆ. ಪ್ರಸಕ್ತ ಭಾರತ ತಂಡದ ತರಬೇತಿ ಸೆಷನ್ಗಳಲ್ಲಿ ಮೂವರು ದೈಹಿಕ ಚಿಕಿತ್ಸಕರು ಹಾಜರಿದ್ದಾರೆ. ಕುಮಾರ್ ಮತ್ತು ಧೀರೇಂದ್ರ ಪ್ರತಾಪ್ ಪುರುಷರ ತಂಡಕ್ಕೆ ದೈಹಿಕ ಚಿಕಿತ್ಸಕರಾಗಿದ್ದರೆ, ರುಚಾ ಕಶಾಲ್ಕರ್ ಮಹಿಳೆಯ ದೈಹಿಕ ಚಿಕಿತ್ಸಕರಾಗಿದ್ದಾರೆ.