‘ಗ್ರೇಟ್’ ವಿರಾಟ್ ಕೊಹ್ಲಿಗೆ ಕೋಲ್ಕೊತ್ತಾದಲ್ಲಿ ನಿರಾಸೆಯಾಗಲ್ಲ ಎಂದ ಸೌರವ್ ಗಂಗೂಲಿ

ಸೋಮವಾರ, 18 ನವೆಂಬರ್ 2019 (09:03 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಿಂದ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮೈದಾನ ಭರ್ತಿಯಾಗುವ ನಿರೀಕ್ಷೆಯಲ್ಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಇದ್ದಾರೆ.


ಈ ಪಂದ್ಯ ಭಾರತ ಮತ್ತು ಬಾಂಗ್ಲಾದೇಶಕ್ಕೆ ಮೊದಲು ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಗಲಿದೆ. ಈ ಐತಿಹಾಸಿಕ ಪಂದ್ಯಕ್ಕೆ ಬಿಸಿಸಿಐ ಸಕಲ ತಯಾರಿ ಮಾಡಿಕೊಂಡಿದೆ.

ಇನ್ನು, ಈ ಪಂದ್ಯಕ್ಕೆ ಮೈದಾನ ಭರ್ತಿಯಾಗುವ ಬಗ್ಗೆ ಮಾತನಾಡಿರುವ ಗಂಗೂಲಿ ‘ವಿರಾಟ್ ಕೊಹ್ಲಿಯಂತಹ ನಮ್ಮ ಗ್ರೇಟ್ ಕ್ರಿಕೆಟಿಗರು ಖಾಲಿ ಮೈದಾನದಲ್ಲಿ ಆಡಬಾರದು. ಇಲ್ಲಿ ಮೊದಲ ಮೂರು ದಿನಗಳ ಟಿಕೆಟ್ ಸೇಲ್ ಭರ್ಜರಿಯಾಗಿದ್ದು, ಮೂರೂ ದಿನದಲ್ಲಿ ಮೈದಾನ ಭರ್ತಿಯಾಗಿರಲಿದೆ ಎಂದು  ಹೇಳಲು ಸಂತೋಷಿಸುತ್ತೇನೆ. ಸುಮಾರು 65 ಸಾವಿರ ಪ್ರೇಕ್ಷಕರು ಈ ದಿನಗಳಲ್ಲಿ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ’ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ