ವೃದ್ಧಿಮಾನ್ ಸಹಾಗೆ ಕುತ್ತಿಗೆ ನೋವು, ಯುವ ಕ್ರಿಕೆಟಿಗ ಶ್ರೀಕರ್ ಭರತ್ ಗೆ ಒಲಿದ ಅದೃಷ್ಟ

ಶನಿವಾರ, 27 ನವೆಂಬರ್ 2021 (10:20 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಯುವ ವಿಕೆಟ್ ಕೀಪರ್ ಶ್ರೀಕರ್ ಭರತ್ ಕಣಕ್ಕಿಳಿದಿದ್ದಾರೆ.

ಕಾರಣ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಕುತ್ತಿಗೆ ನೋವು ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಮೂರನೇ ದಿನ ಅವರು ಕಣಕ್ಕಿಳಿದಿಲ್ಲ. ಅವರ ಬದಲು ಆರ್ ಸಿಬಿ ಪರ ಐಪಿಎಲ್ ಆಡುವ ಯುವ ಕ್ರಿಕೆಟಿಗ ಶ್ರೀಕರ್ ಭರತ್ ಕೀಪಿಂಗ್ ಮಾಡುತ್ತಿದ್ದಾರೆ.

ವಿಶೇಷವೆಂದರೆ ಭರತ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿಲ್ಲ. ಇಂದು ಮೊದಲ ವಿಕೆಟ್ ಪಡೆಯಲೂ ಅವರ ಕೊಡುಗೆ ಇತ್ತು ಎನ್ನುವುದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ