ಮತ್ತೊಮ್ಮೆ ಲಂಕಾ ದಹನಕ್ಕೆ ಸಜ್ಜಾದ ದ್ರಾವಿಡ್ ಹುಡುಗರು

ಮಂಗಳವಾರ, 20 ಜುಲೈ 2021 (08:54 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯಲಿದ್ದು, ಮತ್ತೊಮ್ಮೆ ಮೊದಲ ಪಂದ್ಯದ ಗೆಲುವು ಪುನರಾವರ್ತಿಸುವ ಉತ್ಸಾಹದಲ್ಲಿ ಟೀಂ ಇಂಡಿಯಾವಿದೆ.


ಶಿಖರ್ ಧವನ್ ನೇತೃತ್ವದ ಯುವ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದುಕೊಂಡಿತ್ತು. ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿ ಬಹಳ ದಿನಗಳ ನಂತರ ಜೊತೆಯಾಗಿ ಕಣಕ್ಕಿಳಿದು ಲಂಕಾ ಬಾಲ ಕತ್ತರಿಸಿದರೆ, ಪೃಥ್ವಿ ಶಾ, ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಲಂಕಾ ದಹನ ಮಾಡಿದ್ದರು.

ಹೀಗಾಗಿ ದ್ವಿತೀಯ ಪಂದ್ಯದಲ್ಲೂ ಭಾರತವೇ ಮೇಲುಗೈ ಹೊಂದಿದೆ. ಭಾರತ ಯುವ ಕ್ರಿಕೆಟಿಗರನ್ನೂ ಹೊಂದಿದರೂ ಪ್ರತಿಭಾವಂತರ ತಂಡವೇ ಇಲ್ಲಿದೆ. ಹೀಗಾಗಿ ದುರ್ಬಲ ಲಂಕಾ ಸುಲಭ ಸವಾಲಾಗುತ್ತಿದೆ. ಇಂದಿನ ಪಂದ್ಯವೂ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ