ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಇಂದು ಕೇರಳ ಸವಾಲು

ಶನಿವಾರ, 28 ಸೆಪ್ಟಂಬರ್ 2019 (09:15 IST)
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಕೂಟದಲ್ಲಿ ಇಂದು ಕರ್ನಾಟಕಕ್ಕೆ ಕೇರಳ ಎದುರಾಳಿಯಾಗಿದೆ. ಕಳೆದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ  ಅದ್ಭುತ ಗೆಲುವು ಪಡೆದಿದ್ದ ಕರ್ನಾಟಕ ಇಂದು ಕೇರಳವನ್ನು ಎದುರಿಸಲಿದೆ.


ಇದು ಕರ್ನಾಟಕಕ್ಕೆ ಕೂಟದಲ್ಲಿ ಮೂರನೇ ಪಂದ್ಯವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಕರ್ನಾಟಕಕ್ಕೆ ತವರಿನ ಬಲವಿದೆ. ಆದರೆ ಮೋಡ ಕವಿದ ವಾತಾವರಣವಿದ್ದು, ಮಳೆಯ ಆತಂಕದಲ್ಲೇ ಪಂದ್ಯ ನಡೆಯಬೇಕಿದೆ.

ಕರ್ನಾಟಕ ಬ್ಯಾಟಿಂಗ್ ಈಗಾಗಲೇ ಕಳೆದ ಪಂದ್ಯಗಳಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದೆ. ಆದರೆ ಕರ್ನಾಟಕಕ್ಕೆ ಹೋಲಿಸಿದರೆ ಕೇರಳ ದುರ್ಬಲ ತಂಡವಾಗಿದ್ದು, ಸೋಲಿನ ಸರಪಳಿಯಿಂದ ಹೊರಬರಲು ಪ್ರಯತ್ನಿಸುತ್ತಿದೆ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಕೇರಳ ತಂಡ ಇಂದೂ ಕರ್ನಾಟಕಕ್ಕೆ ಸುಲಭ ತುತ್ತಾಗದೇ ಇರಲು ತೀರ್ಮಾನಿಸಿದಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ