ಕಿವೀಸ್ ವಿರುದ್ಧ ಧ್ವೇಷ ಬೆಳೆಸಲೂ ಕೊಹ್ಲಿಗೆ ಸಾಧ್ಯಾವಾಗುತ್ತಿಲ್ಲವಂತೆ!

ಶುಕ್ರವಾರ, 24 ಜನವರಿ 2020 (09:02 IST)
ಆಕ್ಲೆಂಡ್: ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಎದುರುಬದುರಾಗುತ್ತಿವೆ.


ಅಂದಿನ ಸೋಲಿಗೆ ಈ ಸರಣಿಯಲ್ಲಿ ಸೇಡು ತೀರಿಸಿಕೊಳ್ಳುತ್ತೀರಾ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇಳಿದ್ದಕ್ಕೆ ಅವರ ಪ್ರತಿಕ್ರಿಯೆ ಏನಿತ್ತು ಗೊತ್ತಾ?

ಈ ಆಟಗಾರರ ವಿರುದ್ಧ ಸೇಡಿನ ಬಗ್ಗೆ ಯೋಚನೆ ಮಾಡಲೂ ನಮಗೆ ಸಾಧ‍್ಯವಾಗುತ್ತಿಲ್ಲ. ಯಾಕೆಂದರೆ ಕಿವೀಸ್ ಆಟಗಾರರು ಅಷ್ಟು ಒಳ್ಳೆಯವರು. ಅವರು ಅಂದು ಫೈನಲ್ ತಲುಪಿದ್ದಕ್ಕೆ ನಮಗೆ ಸಂತೋಷವಿದೆ. ಸೇಡಿನ ಮಾತಿಲ್ಲ. ಆದರೆ ಮೈದಾನದಲ್ಲಿ ಪೈಪೋಟಿ ನೀಡಲಿದ್ದೇವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ