ಗಾಲೆ ಟೆಸ್ಟ್ ಟಾಸ್ ಏನಾಯ್ತು? ಹಾರ್ದಿಕ್ ಪಾಂಡ್ಯಗೆ ಅದೃಷ್ಟ ಕೈಹಿಡಿಯಿತಾ? ಇಲ್ಲಿ ನೋಡಿ..

ಬುಧವಾರ, 26 ಜುಲೈ 2017 (09:51 IST)
ಗಾಲೆ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ. ನಿರೀಕ್ಷೆಯಂತೆ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದಾರೆ.


ಹಾರ್ದಿಕ್ ಗೆ ಚೊಚ್ಚಲ ಅವಕಾಶ ನೀಡುವ ಬಗ್ಗೆ ನಾಯಕ ಕೊಹ್ಲಿ ನಿನ್ನೆಯೇ ಸೂಚನೆ ನೀಡಿದ್ದರು. ಕನ್ನಡಿಗ ಕೆಎಲ್ ರಾಹುಲ್ ಜ್ವರದಿಂದ ಬಳಲುತ್ತಿರುವುದರಿಂದ ಈ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಏಕದಿನ ಸ್ಪೆಷಲಿಸ್ಟ್ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ.

ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಜತೆಗೆ ಆರ್. ಅಶ್ವಿನ್.-ಜಡೇಜಾ ಜೋಡಿ ಬೌಲಿಂಗ್ ಜವಾಬ್ದಾರಿ ಹೆಗಲಿಗೇರಿಸಲಿದೆ. ಲಂಕಾ ಪರ ನಾಯಕ ದಿನೇಶ್ ಚಂಡಿಮಾಲ್ ಅನುಪಸ್ಥಿತಿಯಲ್ಲಿ ರಂಗನಾ ಹೆರಾತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧನುಷ್ಕಾ ಗುಣತಿಲಕ  ಈ ಪಂದ್ಯದಲ್ಲಿ ಅವಕಾಶ ಪಡೆದ ಹೊಸಬ.

ಭಾರತ ತಂಡ: ವಿರಾಟ್ ಕೊಹ್ಲಿ,  ಶಿಖರ್ ಧವನ್,  ಅಭಿನವ್ ಮುಕುಂದ್,  ಚೇತೇಶ್ವರ ಪೂಜಾರ,  ಅಜಿಂಕ್ಯಾ ರೆಹಾನೆ,  ಹಾರ್ದಿಕ್ ಪಾಂಡ್ಯ,  ವೃದ್ಧಿಮಾನ್ ಸಾಹಾ,  ಆರ್. ಅಶ್ವಿನ್,  ರವೀಂದ್ರ ಜಡೇಜಾ,  ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ.

ಶ್ರೀಲಂಕಾ: ಉಪುಲ್ ತರಂಗಾ, ದಿಮುತು ಕರುಣರತ್ನೆ, ಕುಸಾಲ್ ಮೆಂಡಿಸ್, ಧನುಷ್ಕಾ ಗುಣತಿಲಕ, ಆಂಜೆಲೋ ಮ್ಯಾಥ್ಯೂಸ್, ಅಸೇಲಾ ಗುಣರತ್ನೆ, ನಿರೋಶನ್ ಡಿಕ್ ವೆಲಾ, ದಿಲ್ ರುವಾನ್ ಪೆರೇರಾ, ರಂಗನಾ ಹೆರಾತ್, ನುವಾನ್ ಪ್ರದೀಪ್, ಲಹಿರು ಕುಮಾರ.

ಪಂದ್ಯ ಆರಂಭ: ಬೆಳಿಗ್ಗೆ 10.00
ನೇರಪ್ರಸಾರ: ಸೋನಿ ಸಿಕ್ಸ್

ಇದನ್ನೂ ಓದಿ..  ಸೆನ್ಸೇಷನಲ್ ಹರ್ಮನ್ ಪ್ರೀತ್ ಕೌರ್ ಮನಸ್ಸು ಕದ್ದವರು ಯಾರು ಗೊತ್ತಾ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ