ವಿಶ್ವಕಪ್ 2019: ಕೊನೆಯ ಹತ್ತು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳದೇ ಎಚ್ಚರಿಕೆಯ ಆಟವಾಡಲು ಆರಂಭಿಸಿತ್ತು. ಆದರೆ ರನ್ ಗತಿ ಏರಿಸಿಕೊಳ್ಳಲು ಅದಕ್ಕೆ ಸಾಧ್ಯವಾಗದೇ ಒತ್ತಡ ಮೈಮೇಲೆಳೆದುಕೊಂಡಿತು. ಹಾಗಿದ್ದರೂ 35 ಓವರ್ ಗಳವರೆಗೂ ಆಸ್ಟ್ರೇಲಿಯಾ ಪರಿಸ್ಥಿತಿ ಕೆಟ್ಟದಾಗೇನೂ ಇರಲಿಲ್ಲ.
ಆದರೆ ಅಂತಿಮ ಹತ್ತು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಸಂಘಟಿತ ದಾಳಿ ನಡೆಸಿದರು. ಆರಂಭದಲ್ಲಿ ವಿಕೆಟ್ ಪಡೆಯಲು ಪರದಾಡಿದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅಂತಿಮ ಹಂತದಲ್ಲಿ ಪಟ ಪಟನೆ ವಿಕೆಟ್ ಉರುಳಿಸಿ ಆಸ್ಟ್ರೇಲಿಯಾ ಸೋಲಿಗೆ ಕಾರಣರಾದರು. ಅಂತಿಮ ಹಂತದಲ್ಲಿ ಅಲೆಕ್ಸ್ ಕ್ಯಾರಿ 55 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ದಾಟಲಿಲ್ಲ. ಹೀಗಾಗಿ ಆಸೀಸ್ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.